ಕ್ರಿ.ಶ.9ನೇ ಶತಮಾನದಲ್ಲಿ ರಾಷ್ಟ್ರಕೂಟರು ಈ ಪ್ರದೇಶವನ್ನು ಆಳುವಾಗ ಜೈನ ದೇವಾಲಯವನ್ನು ನಿರ್ಮಿಸಿದರು, ಸ್ಥಳಿಯರು ಇದನ್ನು ಜೈನ ನಾರಾಯಣ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯದಲ್ಲಿ ದ್ರಾವಿಡರ ಶೈಲಿಯ ವಾಸ್ತುಶಿಲ್ಪವನ್ನು ಕಾಣಬಹುದಾಗಿದೆ. ಈ ದೇವಾಲಯವನ್ನೂ ಕೂಡ ಮೂರು ಗದ್ದಿಗೆಯ ಕಲ್ಲಿನ ಮೇಲೆ ನಿರ್ಮಾಣ ಮಾಡಲಾಗಿದೆ. ಇದು ಪ್ರವಾಸಿಗರ ಅತ್ಯಂತ ಆಕರ್ಷಣೀಯ ತಾಣವಾಗಿದ್ದು ಪಟ್ಟದಕಲ್ಲಿಗೆ ಭೇಟಿ ನೀಡುವವರೆಲ್ಲರೂ ಇಲ್ಲಿಗೆ ಭೇಟಿ ನೀಡಲೇ ಬೇಕು.
ಈ ದೇವಾಲಯವನ್ನು ಮಹಾರಾಜ ಅಮೋಘವರ್ಷ ಅಥವಾ ಆತನ ಮಗ 2ನೇ ಕೃಷ್ಣ ನಿರ್ಮಿಸಿರಬಹುದು ಎಂದು ನಂಬಲಾಗುತ್ತದೆ. ದೇವಾಲಯದ ಕಟ್ಟಡ ಮೂರು ಅಂತಸ್ಥಿನದು, ಕೆಳಭಾಗದ ಎರಡು ಭಾಗಗಳಿಗೆ ಈಗಲೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರು ದೇವಾಲಯದಲ್ಲಿ ಅಂಟಿಚೇಂಬರ್ (ಅಂತರಾಳ), ಪೋರ್ಚ್ (ಮುಕ್ತ-ಮಂಟಪ), ಹಾಲ್ (ಮಂಟಪ)ಹಾಗೂ ವಿಶಾಲವಾದ ಪರಿಶುದ್ಧವಾದ ಅಂಗಳವನ್ನು ಕಾಣಬಹುದು.
ದೇವಾಲಯದ ಹೊರಭಾಗವಾದ ಕಕ್ಷಾಸನವು(ಉನ್ನತಾಸನ)ಕಂಚಿನ ಉಬ್ಬು ಕಲಾಕೃತಿಯಲ್ಲಿ ನೃತ್ಯಗಾರ್ತಿಯರು, ನಿಧಿಗಳು, ವ್ಯಾಲಾಗಳು ಹಾಗೂ ಪೂರ್ಣ-ಘಟ್ಟಗಳನ್ನು ಕಾಣಬಹುದಾಗಿದೆ. ಈ ಮಂಟಪದಲ್ಲಿ ದೊಡ್ಡ ಆನೆಯ ಮೇಲೆ ಮಾವುತ ಕುಳಿತಿರುವ ಚಿತ್ರವನ್ನು ಬಿಡಿಸಲಾಗಿದೆ. ಮಂಟಪದ ಪ್ರದೇಶ ದ್ವಾರದ ಬಳಿ ಪೂಜಿಸಲ್ಪಡುವ ಪೂರ್ಣ-ಘಟ್ಟದಲ್ಲಿ ಶಂಕನಿಧಿ ಹಾಗೂ ಪದ್ಮನಿಧಿಯ ಆರು ಗಾಯನ ತಂಡಗಳ ಚಿತ್ರಗಳಿವೆ. ಇದಲ್ಲದೆ ಪ್ರವಾಸಿಗರು ಅಂತರಾಳ ಹಾಗೂ ಮಂಟಪದಲ್ಲಿ ದೊಡ್ಡ ದೊಡ್ಡ ಕಂಬಗಳನ್ನು ಪ್ರವಾಸಿಗರು ವೀಕ್ಷಿಸಬಹುದು.