ಹಳೆ ಪಟ್ನಾ ನಗರದಿಂದ ಸುಮಾರು 20 ಕಿ.ಮೀ. ಪಶ್ವಿಮದಲ್ಲಿರುವ ದನಾಪುರದಲ್ಲಿ ಗುರುದ್ವಾರ ಹಂಡಿ ಸಾಹಿಬ್ ನೆಲೆನಿಂತಿದೆ. ಪಟ್ನಾ ಸಾಹಿಬ್ ನ್ನು ಬಿಟ್ಟು ತೆರಳಿದ ಗುರು ತೇಗ್ ಬಹದೂರ್ ಅವರ ಕುಟುಂಬ ಮೊದಲ ಸಲ ಇಲ್ಲಿ ವಾಸ್ತವ್ಯ ಹೂಡಿತು. ಧಾರ್ಮಿಕ ಪುಸ್ತಕಗಳಲ್ಲಿರುವಂತೆ ಮಾಯಿ ಪ್ರಧಾನಿ ಎನ್ನುವ ಹಿರಿಯ ಮಹಿಳೆಯೊಬ್ಬರು ಪಾತ್ರೆ(ಹಂಡಿ)ಯಲ್ಲಿ ಖಿಚರಿಯನ್ನು ನೀಡಿದರಂತೆ. ಹಂಡಿವಾಲಿ ಸಂಗತ್ ಎನ್ನುವ ಹೆಸರಿನಿಂದ ಈ ಸ್ಥಳದಲ್ಲಿ ಧಾರ್ಮಿಕ ಕೇಂದ್ರವನ್ನು ನಿರ್ಮಿಸಲಾಯಿತು. ಈಗ ಇದನ್ನು ಹಂಡಿ ಸಾಹಿಬ್ ಗುರುದ್ವಾರವೆಂದೂ ಕರೆಯಲಾಗುತ್ತದೆ.