ಗುರುದ್ವಾರ ಬಾಲ ಲಿಲಾ ಮೈನಿಯು ರಾಜ ಫತೇಹ ಚಾಂದ್ ಮೈನಿಯ ಮನೆ. ಯುವ ಗುರು ಗೋಬಿಂದ್ ಸಿಂಗ್ ಅವರು ಮಕ್ಕಳಿಲ್ಲದ ರಾಣಿಯನ್ನು ಭೇಟಿಯಾಗಿದ್ದರು ಮತ್ತು ಆಧ್ಯಾತ್ಮದ ಮೂಲಕ ಇದನ್ನು ಶಮಗೊಳಿಸಿದರು. ಗುರು ಅವರಿಗೆ ರಾಣಿ ನೀಡಿದಂತಹ ಬೇಯಿಸಿ ಉಪ್ಪು ಹಾಕಿದ ಗೋಧಿಯನ್ನು ಇಂದು ಗುರುದ್ವಾರದಲ್ಲಿ ಪ್ರಸಾದವಾಗಿ ನೀಡಲಾಗುತ್ತಿದೆ. ಮುಂದಿನ ದ್ವಾರದಲ್ಲಿರುವ ಮರದ ಮೇಲಿನ ಕೆತ್ತನೆಯು 1668ರಲ್ಲಿ ಮಾಡಿರುವಂತಹದ್ದು, ಆದರೆ ಗೃಹಗುಡಿಯನ್ನು ಹೊಂದಿರುವ ವಸತಿ ಕೊಠಡಿ ಮತ್ತು ಧಾರ್ಮಿಕ ಕೇಂದ್ರದಲ್ಲಿರುವ ಇತರ ಕೆಲವು ಭಾಗಗಳನ್ನು ಇತ್ತೀಚಿನ ಸಮಯದಲ್ಲಿ ನವೀಕರಣಗೊಳಿಸಲಾಗಿದೆ.