ತ್ರಿವೇಣಿ ಸಂಗಮ್ ಶಬರಿಮಲಕ್ಕೆ ಹೋಗುವ ದಾರಿಯಲ್ಲಿ ಕಾಣಬಹುದು. ಶಬರಿಮಲದಲ್ಲಿರುವ ಹೆಸರುವಾಸಿ ಅಯ್ಯಪ್ಪ ದೇವಾಲಯಕ್ಕೆ ಹೋಗುವ ಭಕ್ತಾದಿಗಳು ಈ ನೀರಿನಲ್ಲಿ ಮುಳುಗೇಳುವ ಪದ್ಧತಿಯಿದೆ. ಶಬರಿಮಲಕ್ಕೆ ಬಂದರೆ ಈ ಸ್ಥಳವನ್ನು ನೋಡಲೇಬೇಕು. ತ್ರಿವೇಣಿ ಸಂಗಮ್ ಎಂಬುದರ ಅರ್ಥ ’ಮೂರು ನದಿಗಳ ಸಂಗಮ’. ಪವಿತ್ರವಾದ ಪಂಬಾ ನದಿ ಹಾಗೂ ಉತ್ತರಕ್ಕೆ ಹರಿಯುವ ಮಣಿಮಾಲಾ ಹಾಗೂ ದಕ್ಷಿಣದ ಅಚಂಕೋವಿ ಈ ಮೂರು ನದಿಗಳ ಸಂಗಮವೇ ತ್ರಿವೇಣೀ ಸಂಗಮ. ಪಂಬಾ ನದಿಯನ್ನು ದಕ್ಷಿಣ ಗಂಗಾ ಎಂದೂ ಕರೆಯುತ್ತಾರೆ. ಅಥವಾ ದಕ್ಷಿಣ ಭಾರತದ ಗಂಗೆ ಎಂತಲೂ ಕರೆಯಲಾಗುತ್ತದೆ. ಶಬರಿಮಲಕ್ಕೆ ಹೋಗುವ ಸಕಸ್ರಾರು ಭಕ್ತರು ತಿವೇಣಿ ಸಂಗಮಕ್ಕೆ ಭೇಟಿ ನೀಡಿಯೇ ಮುಂದೆ ಸಾಗುತ್ತಾರೆ. ಇಲ್ಲಿನ ಭೂಪ್ರದೇಶಕ್ಕೆ ಬಂದ ಎಲ್ಲರೂ ಇಲ್ಲಿನ ಸೌಂದರ್ಯಕ್ಕೆ ಮನಸೋಲುತ್ತಾರೆ.