ಅರನ್ಮುಲ ಪಾರ್ಥಸಾರಥಿ ದೇವಾಲಯ ಪಥನಂತಿಟ್ಟ ಪಟ್ಟಣದಲ್ಲಿರುವ ಚಿಕ್ಕ ಹಳ್ಳಿ, ಅರನ್ಮುಲದಲ್ಲಿ ಕಾಣಬಹುದು. ಈ ದೇವಾಲಯವು ಪವಿತ್ರವಾದ ಪಂಬಾ ನದಿಯ ತಟದಲ್ಲಿ ಸಮೃದ್ಧವಾದ ಹಸಿರಿನ ನಡುವೆ ನಿರ್ಮಿತವಾಗಿದೆ. ಭಗವಾನ್ ಶ್ರೀ ಕೃಷ್ಣ ನ ರೂಪವಾದ ಪಾರ್ಥಸಾರತಿ ಇಲ್ಲಿನ ದೇವರು/ ದೇವತೆ. ಸುಂದರವಾದ ಪಾರ್ಥಸಾರಥಿ ವಿಗ್ರಹದಲ್ಲಿ ಭಗವಂತನ ಕೈಯಲ್ಲಿ ಹಿಡಿದಿರುವ ’ಸುದರ್ಶನ ಚಕ್ರ’ ಭಕ್ತಾದಿಗಳ ಆಕರ್ಷಣೆಯ ಕೇಂದ್ರ ಬಿಂದು. ಈ ದೇವಾಲಯ ಹಾಗೂ ಇಲ್ಲಿನ ವಿಗ್ರಹವು ಕೇರಳದ ಸಾಂಪ್ರದಾಯಿಕ ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ. ಈ ದೇವಾಲಯವನ್ನು ವೃತ್ತಾಕಾರದಲ್ಲಿ ಕಟ್ಟಲಾಗಿದೆ. ಈ ದೇವಾಲಯವನ್ನು ನೊಡುವುದಕ್ಕಾಗಿ ಮಾತ್ರವಲ್ಲದೇ ಓಣಂ ಸಂದರ್ಭದಲ್ಲಿ ಇಲ್ಲಿ ನಡೆಯುವ ಅರನ್ಮುಲ ವಾಲ್ಮಿಕಿ, ಹಾವು ದೋಣಿ ಸ್ಪರ್ಧೆಯನ್ನೂ ಕೂಡಾ ಇಲ್ಲಿಗೆ ಬಂದು ವೀಕ್ಷಿಸಬಹುದು. ಓಣಂ ಸಮಯದಲ್ಲಿ ಅರನ್ಮುಲಕ್ಕೆ ಖಂಡಿತವಾಗಿಯೂ ಭನ್ನಿ. ಇಲ್ಲಿನ ಪ್ರಕೃತಿ ಸೌಂದರ್ಯದ ನಡುವೆ ನಿಮ್ಮ ಮನಸ್ಸಿನ ಶಾಂತಿಗಾಗಿ ಪಾರ್ಥಸಾರಥಿ ದೇವಾಲಯಕ್ಕೆ ಭೇಟಿ ನೀಡಿ. ನಿಮ್ಮ ಪಯಣ ಸ್ಮರಣೀಯವಾಗಿರುವುದರಲ್ಲಿ ಸಂಶಯವಿಲ್ಲ.