ಕಾಲಾ ಅಂಬ್ ಎಂಬುದನ್ನು 1761ರಲ್ಲಿ ನಡೆದ ಮೂರನೆಯ ಪಾಣಿಪತ್ ಯುದ್ಧ ನೆನಪಿಗಾಗಿ ನಿರ್ಮಿಸಲಾದ ಒಂದು ಸ್ಮಾರಕವಾಗಿದೆ. ಈ ಯುದ್ಧವು ಮರಾಠರು ಮತ್ತು ಅಹಮದ್ ಶಾ ಅಬ್ದಾಲಿಯವರ ನಡುವೆ ನಡೆದಿತ್ತು. ಈ ಯುದ್ಧದಲ್ಲಿ ಮರಾಠರನ್ನು ಸದಾಶಿವರಾವ್ ಭಾವು, ವಿಶ್ವಾಸ್ರಾವ್ ಮತ್ತು ಮಹಾದಾಜಿ ಶಿಂಧೆಯವರು ಮುನ್ನಡೆಸಿದ್ದರು. ಈ ಯುದ್ಧ ನಡೆದ ಸ್ಥಳವನ್ನು ಒಂದು ಮಾವಿನ ಮರದಿಂದ ಗುರುತಿಸಲಾಗುತ್ತಿತ್ತು.
ಕುತೂಹಲಕರವಾದ ವಿಚಾರವೇನೆಂದರೆ ಈ ಮಾವಿನ ಮರದಲ್ಲಿ ಬಿಡುವ ಹಣ್ಣುಗಳು ಕಪ್ಪು ಬಣ್ಣದಲ್ಲಿದ್ದವಂತೆ. ನಂಬಿಕೆಗಳ ಪ್ರಕಾರ ಈ ಮರವು ಯುದ್ಧದಲ್ಲಿ ಸತ್ತ ಸೈನಿಕರ ರಕ್ತವು ನೆನೆದ ಮಣ್ಣಿನಲ್ಲಿ ಬೆಳೆದಿರುವುದರಿಂದ ಈ ಬಣ್ಣ ಬರುತ್ತದೆ ಎಂದು ಹೇಳುತ್ತಾರೆ. ಈ ಮರವು ತುಂಬಾ ಹಿಂದೆಯೇ ಕಾಣದಾಯಿತು. ಈ ಸ್ಮಾರಕವನ್ನು ಕಪ್ಪು ಸ್ಮಾರಕವೆಂದು ಕರೆಯುತ್ತಾರೆ. ಬಹುಶಃ ಇಲ್ಲಿ ಬೆಳೆಯುವ ಕಡು ಹಸಿರು ಬಣ್ಣದ ಎಲೆಗಳ ಗೊಂಚಲಿನಿಂದಾಗಿ ಈ ಹೆಸರನ್ನು ಕರೆಯುತ್ತಿರಬಹುದು.
ಇಲ್ಲಿ ಇಟ್ಟಿಗೆಗಳಿಂದ ಕೂಡಿರುವ ಒಂದು ಸ್ತಂಭವಿದ್ದು, ಇದಕ್ಕೆ ಕಬ್ಬಿಣದ ಸರಳನ್ನು ಸಹ ಅಳವಡಿಸಿದ್ದಾರೆ. ಈ ಸ್ತಂಭದಲ್ಲಿ ಇಂಗ್ಲೀಷ್ ಮತ್ತು ಉರ್ದುವಿನಲ್ಲಿ ಪಾಣಿಪತ್ ಯುದ್ಧದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುವ ಶಾಸನವನ್ನು ಸಹ ನಾವು ನೋಡಬಹುದು. ಹರಿಯಾಣ ರಾಜ್ಯಪಾಲರ ಆಡಳಿತಕ್ಕೆ ಒಳಪಟ್ಟಿರುವ ಒಂದು ಸ್ಂಘವು ಇದರ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ.