ನದಾ ಸಾಹೀಬ್ ಪಂಚಕುಲದ ಧಾರ್ಮಿಕ ಸ್ಥಳಗಳಲ್ಲೊಂದು. ಈ ಗುರುದ್ವಾರವು ನಗರದಿಂದ 15 ಕಿಮೀ ದೂರದಲ್ಲಿ ಘಗ್ಗರ್ ನದಿ ದಂಡೆಯಲ್ಲಿ ಶಿವಾಲಿಕ್ ಬೆಟ್ಟದ ತಪ್ಪಲಿನಲ್ಲಿದೆ. ಈ ಸ್ಥಳವು ಸಿಖ್ಖರ ಪ್ರಸಿದ್ಧ ಧಾರ್ಮಿಕ ಸ್ಥಳ. ಇತಿಹಾಸದ ಪ್ರಕಾರ ಗುರು ಗೋವಿಂದ ಸಿಂಗನು ತನ್ನ ಸೈನಿಕರೊಡನೆ ಭಂಗನಿ ಯುದ್ಧದಲ್ಲಿ ಮೊಗಲರನ್ನು ಸೋಲಿಸಿದ ನಂತರ ಈ ಸ್ಥಳದಲ್ಲಿ ತಂಗಿದ್ದನು.
ನಾದಾ ಷಾನು ಗುರು ಗೋವಿಂದ ಸಿಂಗನ ಅನುಯಾಯಿಗಿದ್ದನು. ಆತ ಯುದ್ಧದಲ್ಲಿ ಜಯಗಳಿಸಿದ ಸೈನಿಕರನ್ನು ಆದರದಿಂದ ಬರಮಾಡಿಕೊಂಡು ಅವರಿಗೆ ಆದರ ಸತ್ಕಾರಗಳನ್ನು ಮಾಡಿದನು. ಗುರು ಗೋವಿಂದ ಸಿಂಗನು ಈತನಿಗೆ ಆಶೀರ್ವಾದ ಮಾಡಿದನು. ಆದ್ದರಿಂದಲೇ ಈ ಗುರುದ್ವಾರಕ್ಕೆ ನಾದಾ ಸಾಹಿಬನ ಹೆಸರನ್ನು ಇಡಲಾಗಿದೆ. ಸಿಖ್ಖರು ಇಲ್ಲಿಗೆ ಪ್ರತಿ ತಿಂಗಳ ಹುಣ್ಣಿಮೆ ಅಥವ ಪೌರ್ಣಮಶಿಯಂದು ಭೇಟಿ ನೀಡುತ್ತಾರೆ. ಉತ್ತರ ಭಾರತದ ಈ ಜನಗಳು ಇದನ್ನು ವಿಶೇಷ ಸಂದರ್ಭವಾಗಿ ಆಚರಿಸುತ್ತಾರೆ.
ಮೊಹ್ತಾ ಸಿಂಗನು ಕಟ್ಟಿಸಿದ ಮೂಲ ಮಂಜಿ ಸಾಹಿಬ್ ಕಟ್ಟಡವನ್ನು ಬದಲಾಯಿಸಲಾಗಿದೆ. ಈಗ ಇದು ಎರಡು ಅಂತಸ್ತುಗಳ ಗೊಮ್ಮಟ ಕಟ್ಟಡ. ಸಭಾಂಗಣವು ಇದರ ಪಕ್ಕದಲ್ಲಿದೆ. ಗುರು ಕಾ ಲಂಗರ್ ಮತ್ತು ಯಾತ್ರಾರ್ಥಿಗಳ ವಸತಿಯು ಮತ್ತೊಂದು ಸಂಕೀರ್ಣದಲ್ಲಿದೆ. ಇದು ಮುಖ್ಯ ಗುರುದ್ವಾರದಿಂದ ಬೇರೆಯಾಗಿದ್ದು ಇದರ ನಡುವೆ ಇಟ್ಟಿಗೆಯ ಗೋಡೆಯಿದೆ.