ಪಲ್ವಾಲ್, ಹತ್ತಿಯ ಕೇಂದ್ರವಾಗಿದ್ದು ಹರ್ಯಾಣದ ಪಲ್ವಾಲ್ ಜಿಲ್ಲೆಯಲ್ಲಿದೆ. ಇದು ದೆಹಲಿಯಿಂದ ಅರವತ್ತು ಕಿಲೋಮೀಟರ್ ದೂರದಲ್ಲಿದೆ. ಪಾಂಡವರ ಕಾಲದಲ್ಲಿ ಪಲ್ವಾಸುರ ಎನ್ನುವ ರಾಕ್ಷಸನಿದ್ದನು, ಹಾಗಾಗಿ ಇದಕ್ಕೆ ಪಲ್ವಾಲ್ ಹೆಸರು ಬಂತು ಎನ್ನುವುದು ನಂಬಿಕೆ. ಮಹಾಭಾರತದಲ್ಲೂ ಪಲ್ವಾಲ್ ಬಗ್ಗೆ ಉಲ್ಲೇಖವಿದ್ದು, ಪಾಂಡವ ಸಾಮ್ರಾಜ್ಯದ ಇಂದ್ರಪ್ರಸ್ಥದ ಜೊತೆಗಿದೆ. ಪಲ್ವಾಸುರ ಎನ್ನುವ ರಾಕ್ಷಸನು ಕೃಷ್ಣ ಪರಮಾತ್ಮನ ಸಹೋದರ ಬಲರಾಮನಿಂದ ಹತನಾದ. ಇದು ವಿಕ್ರಮಾದಿತ್ಯ ಅರಸನ ಸ್ಥಳವೂ ಆಗಿತ್ತು.
ಬ್ರಿಟಿಷರ ಆಳ್ವಿಕೆಯಲ್ಲಿ, ಇದು ಪಂಜಾಬ್ ಮತ್ತು ಗುರಗಾಂ ಪ್ರದೇಶಕ್ಕೆ ಸೇರಿತ್ತು. ಪಲ್ವಾಲ್ ಐತಿಹಾಸಿಕವಾಗಿಯೂ ಪ್ರಸಿದ್ದಿ ಪಡೆದಿದ್ದು ಹಲವಾರು ಸ್ವಾತಂತ್ಯ ಯೋಧರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದರು.
ಪ್ರತಿವರ್ಷ ಬಲದೇವ್ ಚಟ್ ಕಾ ಮೇಳ ಇಲ್ಲಿ ಆಯೋಜಿಸಲಾಗುತ್ತದೆ. ಬಲರಾಮನಿಗೆ ಇಲ್ಲಿ ದೇವಾಲಯವಿದ್ದು ಅದನ್ನು ದೌಜಿ ದೇವಾಲಯವೆಂದು ಕರೆಯುತ್ತಾರೆ. ಈ ದೇವಾಲಯ ಪಲ್ವಾಲಿನ ಮುನ್ಸಿಪಲ್ ವೃತ್ತದ ಬಳಿಯಿದೆ.
ಪಲ್ವಾಲ್ ದೇಶದ ಹತ್ತಿ ಉತ್ಪಾದನೆಯಲ್ಲಿ ಮಂಚೂಣಿಯಲ್ಲಿದೆ. ಇಲ್ಲಿಂದ ಹತ್ತಿಯು ದೇಶದ ಇತರ ಭಾಗಗಳಿಗೆ ಹತ್ತಿ ಸರಬರಾಜು ಆಗುತ್ತದೆ.
ಪಲ್ವಾಲ್ ಸುತ್ತಮುತ್ತವಿರುವ ಪ್ರವಾಸಿ ಸ್ಥಳಗಳು
ಪ್ರಸಿದ್ದ ಹಿಂದೂ ದೇವಾಲಯ ಪಂಚವಟಿ ಇರುವುದು ಇಲ್ಲೇ. ಇದು ಹಿಂದೂಗಳ ಧಾರ್ಮಿಕ ಶ್ರದ್ದೆಯ ಕೇಂದ್ರ, ಇತರ ಪ್ರಮುಖ ದೇವಾಲಯಗಳೆಂದರೆ ಭಗವಾನ್ ಪರಶುರಾಮ ಮಂದಿರ ಕುಲೇನಾ, ಜಂಗೇಶ್ವರ ಮಂದಿರ, ದೌಜಿ ಮಂದಿರ, ಕಾಮೇಟಿ ಚೌಕದಲ್ಲಿರುವ ದೇವಿ ದೇವಾಲಯ, ಶ್ರದ್ದಾನಂದ ಪಾರ್ಕ್, ಡಿ ಪಾರ್ಕ್, ತಿಖೋನಾ ಪಾರ್ಕ್, ಪಂಚಾಯತ್ ಭವನ. ಇತರ ಪಾರ್ಕುಗಳೆಂದರೆ ಕಿಲ್ಲೆ ವಾಲಾ ಪಾರ್ಕ್, ತಂಕಿ ವಾಲಾ ಪಾರ್ಕ್, ಬೈ ಭವನ್, ಡಿ ಜಿ ಖಾನ್ ಹಿಂದು, ತೌ ದೇವಿ ಲಾಲ್ ಪಾರ್ಕ್ (ಟೌನ್ ಪಾರ್ಕ್), ದುಸ್ಸೆರಾ ಗ್ರೌಂಡ್ ಪಾರ್ಕ್ ಮತ್ತು ಹುಡಾ ಪಾರ್ಕ್.
ಪಲ್ವಾಲಿನ ವಾತಾವರಣ
ಮಳೆಗಾಲ ಹೊರತು ಪಡಿಸಿ ಇಲ್ಲಿ ಸೆಖೆಯ ವಾತಾವರಣ ವಿರುತ್ತದೆ.