ಪಚಮಡಿಯಿಂದ 10 ಕಿ ಮೀ ಅಂತರದಲ್ಲಿ ಈ ಗುಹೆಯಿದೆ. ಇಲ್ಲಿ ಶಿವನ ಗುಡಿಯಿದೆ. ಇದು 60 ಅಡಿ ಉದ್ದದ ಗುಹೆಯಾಗಿದೆ. ಈ ಗುಹೆಯ ಒಳಗೆ ಬ್ರಹ್ಮ,ವಿಷ್ಣು ಮತ್ತು ಗಣೇಶನ ಗುಡಿಗಳು ಕೂಡ ಇವೆ. ಮೋಹಿನಿ ಅವತಾರ ತಾಳಿದ ಭಗವಾನ್ ವಿಷ್ಣುವು ಭಸ್ಮಾಸುರನನ್ನು ಇಲ್ಲಿ ಕೊಂದ ಎಂಬುದು ಸ್ಥಳೀಯರ ನಂಬಿಕೆಯಾಗಿದೆ. ಈ ಗುಹೆಯಿಂದ ಸತತವಾಗಿ ನೀರಿನ ಹನಿ ಬೀಳುತ್ತಿರುತ್ತದೆ ಮತ್ತು ಇದು ಕೊಳವನ್ನು ಸೇರುತ್ತದೆ. ಆ ಕೊಳದಲ್ಲಿ ಸ್ನಾನ ಮಾಡಿದರೆ ಸರ್ವ ರೋಗ ಪರಿಹಾರ ಆಗುತ್ತದೆ ಎನ್ನಲಾಗಿದೆ. ಇದು ಧಾರ್ಮಿಕ ಮತ್ತು ಸುಂದರವಾದ ನೈಸರ್ಗಿಕ ಸ್ಥಳ ಎನ್ನಬಹುದು.