Tಅರ್ಪಣೆಯ ದೇವಾಲಯವು ಹೆಸರು ಘಟ್ಟ ಕೆರೆಯ ಬಳಿ 1998ರಲ್ಲಿ ಶಾಸ್ತ್ರೀಯ ನೃತ್ಯಕ್ಕಾಗಿಯೇ ನಿರ್ಮಾಣಗೊಂಡಿರುವ ಒಂದು ವಸತಿ ಶಾಲೆಯಾಗಿದೆ. ಈ ಶಾಲೆಯು ಗುರು ಕೇಳು ಚರಣ್ ಮೊಹಪಾತ್ರರ ವಿವಿಧ ಭಂಗಿಗಳ ಸುಂದರವಾದ ಕೆತ್ತನೆಗಳಿಂದ ಮತ್ತು ಅವರ ಆಶಯಗಳನ್ನು ಹೊತ್ತ ಕೆತ್ತನೆಗಳಿಂದ ಸಿಂಗರಿಸಲ್ಪಟ್ಟಿದೆ. ಗುರು ಕೇಳು ಚರಣ್ ಮೊಹಪಾತ್ರರು ಈ ದೇವಾಲಯದ ಸ್ಥಾಪಕಿಯಾದ ಪ್ರೊತಿಮಾ ಬೇಡಿಯ ಗುರುವಾಗಿದ್ದರು. ಇವರು ಜನವರಿ 8,1926ರಲ್ಲಿ ಜನಿಸಿದರು. ಇವರು ಭಾರತದ ಸುಪ್ರಸಿದ್ಧ ಶಾಸ್ತ್ರೀಯ ನಾಟ್ಯ ಕಲಾವಿದರಾಗಿ, ಗುರುವಾಗಿ ಮತ್ತು ಒಡಿಸ್ಸಿ ನೃತ್ಯ ಪ್ರಕಾರದ ಆದ್ಯ ಪ್ರವರ್ತಕರಾಗಿ ಹೆಸರುವಾಸಿಯಾಗಿದ್ದರು. ಅಲ್ಲದೆ ಇವರು 20ನೇ ಶತಮಾನದಲ್ಲಿ ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರದ ಪುನರುಜ್ಜೀವನಗೊಳಿಸಿದ ಖ್ಯಾತಿಯನ್ನು ಮುಡಿಗೆರಿಸಿಕೊಂಡವರು ಸಹಾ ಹೌದು. ಇವರು 7 ಏಪ್ರೀಲ್ 2004ರಲ್ಲಿ ನಿಧನ ಹೊಂದಿದರು. ಇವರ ನೆನಪಿಗೆ ನಿರ್ಮಿಸಲಾಗಿರುವ ದೇವಾಲಯವನ್ನು ನೃತ್ಯಗ್ರಾಮಕ್ಕೆ ಹೋದಾಗ ತಪ್ಪದೆ ಭೇಟಿ ಕೊಡಬೇಕು.