ನೊಯ್ಡಾಗೆ ಸಮೀಪದಲ್ಲೇ, ದೆಹಲಿಯ ಕೈಲಾಶ್ ನ ಪೂರ್ವದಲ್ಲಿ 1998ರಲ್ಲಿ ಕೃಷ್ಣ ಕಾನ್ಶಿಯಸ್ನೆಸ್ ಅಂತಾರಾಷ್ಟ್ರೀಯ ಸೊಸೈಟಿ ನಿರ್ಮಿಸಿದ ಈ ಭವ್ಯ ಮಂದಿರ ಇಸ್ಕಾನ್ ಎಂದೇ ಜನಪ್ರಿಯ. ಇಸ್ಕಾನ್ ಮಂದಿರವನ್ನು ಹರೇ ರಾಮ ಹರೇ ಕೃಷ್ಣ ಎಂದೂ ಕರೆಯುತ್ತಾರೆ. ಮಂದಿರದಲ್ಲಿ ಭಕ್ತಾದಿಗಳು ಹೆಚ್ಚಾಗಿ ಹರೇ ರಾಮ ಹರೇ ಕೃಷ್ಣ ಎಂದು ಕೀರ್ತನೆ ಹಾಡುತ್ತಿರುತ್ತಾರೆ.
ಭಗವದ್ಗೀತೆಯ ಸಂದೇಶವನ್ನು ಸಾರುವ ಸಲುವಾಗಿ ಆಚಾರ್ಯ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರು ಈ ಮಂದಿರದ ನಿರ್ಮಾಣ ಕಾರ್ಯ ಆರಂಭಿಸಿದ್ದರು. ರಷ್ಯಾದ ವಾಸ್ತುಶಿಲ್ಪಿಗಳು ಇದರ ಗೋಡೆಗಳನ್ನು ಶೃಂಗರಿಸುವುದಲ್ಲಿ ಮಹತ್ವದ ದೇಣಿಗೆ ನೀಡಿದ್ದಾರೆ ಮತ್ತು ಗೋಡೆಗಳ ಮೇಲೆ ರಾಮ, ಸೀತೆ, ಕೃಷ್ಣ ಮತ್ತು ರಾಧೆಯ ಕಥಾಚಿತ್ರಗಳಿವೆ.
ಪ್ರಾರ್ಥನೆಗೆ ಬಳಸುವ ಕೇಂದ್ರ ಸಭಾಂಗಣ ಮಂದಿರ ಪ್ರಮುಖ ಆಕರ್ಷಣೆ. ಇಲ್ಲಿರುವ ಮ್ಯೂಸಿಯಂನಲ್ಲಿ ರಾಧೆ ಮತ್ತು ಕೃಷ್ಣನ ಮೂರ್ತಿಗಳಿವೆ. ದಿನಂಪ್ರತಿ ಬೆಳಗ್ಗೆ ಮತ್ತು ಸಂಜೆ ನಡೆಯುವ ಪ್ರಾರ್ಥನೆ, ಕೀರ್ತನೆ, ಪ್ರವಚನಗಳನ್ನು ಹೊರತುಪಡಿಸಿ ಮಂದಿರದಲ್ಲಿ ಯಾವಾಗಲೂ ರಾಮಾಯಣ ಮತ್ತು ಮಹಾಭಾರತದ ಪ್ರಾಮುಖ್ಯತೆ ಬಗ್ಗೆ ಮಲ್ಟಿಮೀಡಿಯಾ ಪ್ರದರ್ಶನಗಳಿರುತ್ತದೆ.