ಶ್ರೀ ನೀಲಕಂಠೇಶ್ವರ ದೇವಾಲಯ ನಿಜಾಮಾಬಾದ್ ನಲ್ಲಿದೆ. ಇದು ಹೊರಗಿನಿಂದ ಬರುವ ಯಾತ್ರಾರ್ಥಿಗಳು ಮತ್ತು ಸ್ಥಳೀಯರಲ್ಲಿ ಬಹಳ ಪ್ರಸಿದ್ಧವಾಗಿದೆ. ಪ್ರತಿ ದಿನ ಅದರಲ್ಲೂ ಸೋಮವಾರದಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಇಲ್ಲಿ ಶಿವದೇವರನ್ನು ನೀಲಕಂಠೇಶ್ವರನ ರೂಪದಲ್ಲಿ ಆರಾಧಿಸಲಾಗುತ್ತದೆ. ಸಮುದ್ರ ಮಥನದ ಸಮಯದಲ್ಲಿ ಹೊರ ಬಂದ ವಿಶವನ್ನು ಶಿವ ಕುಡಿದ ಎಂಬ ಪ್ರತೀತಿ ಇದೆ. ಆ ವಿಶವನ್ನು ಆತ ಗಂಟಲಲ್ಲೇ ಇಟ್ಟುಕೊಂಡ ಹಾಗಾಗಿ ಆತನ ಗಂಟಲು ನೀಲಿ ಬಣ್ಣದಿಂದ ಕೂಡಿದೆ ಹಾಗಾಗಿ ಆತನನ್ನು ನೀಲಕಂಠೇಶ್ವರ ಎಂದು ಕರೆಯಲಾಗುತ್ತದೆ.
ಈ ದೇವಾಲಯವನ್ನು ಶಾತವಾಹನ ವಂಶದ ದ್ವಿತೀಯ ಶತಕರ್ಣಿ ಕಟ್ಟಿಸಿದ ಎಂದು ನಂಬಲಾಗಿದೆ. ಈ ದೇವಾಲಯದ ವಾಸ್ತುಶಿಲ್ಪದ ಶೈಲಿ ಉತ್ತರ ಭಾರತದ ವಾಸ್ತುಶಿಲ್ಪದ ಶೈಲಿಯನ್ನು ಬಹಳ ಹೋಲುತ್ತದೆ. ಇದಕ್ಕೆ ಕಾರಣವೂ ಇದೆ. ಆ ಕಾಲದಲ್ಲಿ ಇಲ್ಲಿ ನೆಲೆಸಿದ್ದ ಜೈನ ಸಮುದಾಯಕ್ಕಾಗಿ ಈ ದೇವಾಲಯವನ್ನು ವಿಶೇಷವಾಗಿ ಕಟ್ಟಿಸಿದ ಕಾರಣ ಈ ರೀತಿಯ ಸಾಮ್ಯವನ್ನು ನಾವು ಕಾಣಬಹುದಾಗಿದೆ.