ಅರುವಕೊಡೆ ನಿಲಂಬೂರ್ ಸಮೀಪದ ಒಂದು ಸಣ್ಣ ಗ್ರಾಮ. ಇದು ಸಂಸ್ಕೃತಿ, ಕಲೆ ಹಾಗೂ ಕುಂಭಾರನ್ ಹೆಸರಿನ ಸಮುದಾಯದ ಮಡಿಕೆಗಳಿಗೆ ಹೆಸರುವಾಸಿಯಾಗಿದೆ. ಈ ಸ್ಥಳವು ಸಂದರ್ಶಕರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಹಳ್ಳಿಯಲ್ಲಿ, ಮಣ್ಣಿನ ಕುಂಭಂ ಹ್ಯಾಂಡಿಕ್ರಾಫ್ಟ್ ಪ್ರಾಜೆಕ್ಟ್ ನ್ನು ಕಲಾವಿದ ಕೆ.ಬಿ ಜಿನಾನ್ ಆರಂಭಿಸುವುದರ ಮೂಲಕ ಈ ಸ್ಥಳವನ್ನು ಜನಪ್ರಿಯಗಳಿಸಿದರು.
ಈ ಗ್ರಾಮದಲ್ಲಿ ನೆಲೆಸಿರುವ ಸುಮಾರು ನೂರು ಕುಟುಂಬಗಳು, ಮಣ್ಣಿನ ಮಡಿಕೆಗಳು, ತೋಟದ ಪೀಠೋಪಕರಣಗಳು, ವಾಸ್ತುಶಿಲ್ಪ ಮತ್ತು ಪಾತ್ರೆಗಳನ್ನು ತಯಾರಿಸುವ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂದು ಈ ಗ್ರಾಮಕ್ಕೆ ಅರುವಕೊಡೆ ಪಾಟರಿ ವಿಲೇಜ್ ಎಂದೂ ಸಹ ಕರೆಯಲಾಗುತ್ತದೆ.
ಈ ಪ್ರದೇಶದ ಆರ್ಥಿಕ ಹಿನ್ನಡೆಗೆ ಕಾರಣ ಜಾಗತೀಕರಣದ ಆಗಮನದಿಂದಾಗಿ ಸಾಂಪ್ರದಾಯಿಕ ನುರಿತ ಕುಂಬಾರರ ಮಡಕೆಗಳಿಗೆ ಬೆಲೆಯಿಲ್ಲದಂತಾಗಿರುವುದು. ಜೇಡಿಮಣ್ಣಿನ ಮಡಕೆಗಳು ಮತ್ತು ಪಾತ್ರೆಗಳು ಅದರ ಜನಪ್ರಿಯತೆಯನ್ನು ಕಳೆದುಕೊಂಡವು. ಆದರೆ ಕೆಬಿ ಜಿನನ್ ನೇತೃತ್ವದಲ್ಲಿ ಗ್ರಾಮದ ಕುಂಬಾರರ ಈ ಕಲೆಯು ಪುನಶ್ಚೇತನಗೊಂಡಿದ್ದು ಕುಂಭಂ ಹ್ಯಾಂಡಿಕ್ರಾಫ್ಟ್ ಪ್ರಾಜೆಕ್ಟ್ ನಿಂದಾಗಿ. ಇಂದು ಕುಂಭಂ ಹ್ಯಾಂಡಿಕ್ರಾಫ್ಟ್ ಪ್ರಾಜೆಕ್ಟ್ ಸುಮಾರು 500 ಅನನ್ಯ ವಿನ್ಯಾಸಗಳನ್ನು ಹೊಂದಿದೆ.
ಪ್ರವಾಸಿಗರು ಇಲ್ಲಿನ ಅಂಗಡಿಗಳಲ್ಲಿ ಕುಂಭ ಉತ್ಪನ್ನಗಳನ್ನು ಖರೀದಿಸಬಹುದು.