ಸುಖಾನಂದಜೀ ಆಶ್ರಮ ನೀಮಚ್ ನಿಂದ 32 ಕಿಲೋಮೀಟರು ದೂರದಲ್ಲಿದ್ದು, ರಾಜಸ್ಥಾನದ ಗಡಿಯಲ್ಲಿದೆ. ಈ ಆಶ್ರಮವು ಸುಂದರವಾದ ಪುರಾತನ ಕಲ್ಲಿನ ಗುಹೆಯಲ್ಲಿದೆ. ಇದರ ಹತ್ತಿರದಲ್ಲಿ ಶಿವನ ದೇವಸ್ಥಾನವಿದ್ದು, ಈ ಆಶ್ರಮ ಪ್ರಕೃತಿ ರಮಣೀಯವಾಗಿದೆ. ವ್ಯಾಸದೇವ ಅವರ ಮಗನಾದ ಶುಕ, ಈ ಆಶ್ರಮವನ್ನು ಸ್ಥಾಪಿಸಿದ್ದ ಎಂದು ನಂಬಲಾಗುತ್ತದೆ. ವ್ಯಾಸದೇವ ಅಥವಾ ವೇದವ್ಯಾಸ ಅವರು, 24000 ಶ್ಲೋಕಗಳನ್ನು ಒಳಗೊಂಡ ಭಾರತ ಸಂಹಿತ ದ ರಚನೆಕಾರರು. ಶುಕ ಅಥವಾ ಶುಕದೇವ ಅಥವಾ ಬ್ರಹ್ಮರತ ಅವರು ವೈಷ್ಣವರ ಪುರಾಣ ಗ್ರಂಥಗಳಲ್ಲಿನ ಪ್ರಶಂಸನೀಯ ವ್ಯಕ್ತಿಯಾಗಿದ್ದಾರೆ. ಇಲ್ಲಿಗೆ ಎಲ್ಲಾ ಕಾಲಗಳಲ್ಲೂ ಯಾತ್ರಿಗಳು ಭೇಟಿ ನೀಡುತ್ತಾರೆ. ಹರ್ಯಲಿ ಅಮಾವಾಸ್ಯ ಮತ್ತು ಬೈಶಖ್ ಪೂರ್ಣಿಮ ಸುಖಾನಂದಜೀ ಆಶ್ರಮದಲ್ಲಿನ ಎರಡು ಪ್ರಮುಖ ವಾರ್ಷಿಕ ಜಾತ್ರೆಗಳು.