ಕಿರ್ಪಾಲ್ ಸಾಗರ್ ರಹೊನ್ಗೆ ಸಮೀಪದ ದರಿಯಪುರ್ ಎಂಬ ಗ್ರಾಮದಲ್ಲಿ ನೆಲೆಗೊಂಡಿದೆ. ಈ ಸ್ಥಳವು ಮನುಜಮತ ತಾನೊಂದೆ ವಲಂ ಎಂಬ ಕವಿವಾಣಿಯನ್ನು ನೆನಪಿಸುವಂತೆ ನಿಂತಿದೆ. ಇಲ್ಲಿ ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರೈಸ್ತ ಧರ್ಮದ ಜನರು ಬಂದು ಪೂಜಾ ಕೈಂಕರ್ಯಗಳನ್ನು ಮಾಡಿಕೊಂಡು ಹೋಗುತ್ತಿರುತ್ತಾರೆ. ಇದನ್ನು ಸಂತ ಕಿರ್ಪಾಲ್ ಸಿಂಗ್ ಜೀಯವರ ಭಕ್ತಾಧಿಗಳು ನಿರ್ಮಿಸಿದರು. ಈ ಸಂತರು " ನಾವೆಲ್ಲರು ಒಂದೇ" ಎಂಬ ಸಂದೇಶವನ್ನು ಸದಾ ಸಾರುತ್ತಿದ್ದರು. ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರೈಸ್ತರ ಪವಿತ್ರ ಮಂದಿರಗಳ ಸುತ್ತ ಮೊಟ್ಟೆಯಾಕಾರದ ಕೊಳವೊಂದನ್ನು ನಿರ್ಮಿಸಲಾಗಿದೆ. ಈ ಕೊಳವು ಧಾರ್ಮಿಕ ಸಾಮರಸ್ಯವನ್ನು ಬಿಂಬಿಸುತ್ತದೆ.