ಗುರುದ್ವಾರ ಭಾಯ್ ಸಿಖ್ ಹಿಯಾಲವನ್ನು ಬಾಬಾ ಭಾಯ್ ಸಿಖ್ರವರು ಹಿಂದೆ ನೆಲೆಸಿದ್ದರೆಂದು ನಂಬಲಾದ ನಿವಾಸದಲ್ಲಿ ನಿರ್ಮಾಣ ಮಾಡಲಾಗಿದೆ. ನಂಬಿಕೆಗಳ ಪ್ರಕಾರ ಬಾಬಾಜೀಯವರು ಇಲ್ಲಿ ನೆಲೆಸಿ ಭಕ್ತಾಧಿಗಳಿಗೆ ಆಧ್ಯಾತ್ಮಿಕ ಸಾಕ್ಷಾತ್ಕಾರವನ್ನು ಉಂಟು ಮಾಡುತ್ತಿದ್ದರು ಎಂದು ಭಾವಿಸಲಾಗಿದೆ. ಅವರ ಪ್ರಕಾರ ಯಾರು ಮಾನವೀಯತೆಯಿಂದ ಜನರ ಸೇವೆ ಮಾಡುತ್ತಾರೋ, ಅವರೇ ನಿಜವಾದ ಆಸ್ತಿಕರು. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಇಲ್ಲಿ ಒಂದು ದೊಡ್ಡ ಜಾತ್ರೆಯು ನಡೆಯುತ್ತದೆ. ಇದು ಪ್ರವಾಸಿಗರನ್ನು ಹತ್ತಿರದ ಮತ್ತು ದೂರದ ಸ್ಥಳಗಳಿಂದ ತನ್ನತ್ತ ಆಕರ್ಷಿಸುತ್ತದೆ.