ಬಿಹಾರದ,ನಾವಡಾ ಜಿಲ್ಲೆಯ ಉತ್ತರ ಭಾಗದಲ್ಲಿರುವ ಹಳ್ಳಿಯೇ ಗುಣವ. ಶ್ರೀ ದಿಗಂಬರ ಜೈನ ಸಿದ್ದ ಕ್ಷೇತ್ರ ಗುಣವಜಿಯವರ ಜೈನ ದೇವಾಲಯವಿರುವ ಕಾರಣ ಈ ಕ್ಷೇತ್ರವು ಜೈನ ಬಾಂಧವರ ಪವಿತ್ರ ದಾರ್ಮಿಕ ಕ್ಷೇತ್ರವಾಗಿದೆ. ತನ್ನಂಗಳದಲ್ಲಿ ನಲವತ್ತು ದೇಗುಲಗಳನ್ನು ಹೊಂದಿರುವ ಗುಣವಜಿ ದೇವಾಲಯವು ಸರೋವರದ ಮಧ್ಯದಲ್ಲಿ, ಸೇತುವೆಯಿಂದ 60 ಮೀಟರ ದೂರದಲ್ಲಿದೆ. ಇದು ಭಾರತದಲ್ಲಿರುವ ಅತ್ಯುತ್ತಮ ಜೈನ ದೇವಾಲಯಗಳಲ್ಲೊಂದು.
ಈ ದೇವಾಲಯಕ್ಕೆ ಹಲವಾರು ಭಕ್ತರು ಭೇಟಿ ಇತ್ತು ಪುನೀತರಾಗಿದ್ದಾರೆ. ಈ ಧಾರ್ಮಿಕ ಕ್ಷೇತ್ರದ ಸನಿಹದಲ್ಲೆ ಗಾಂಧಾರ ಇಂದ್ರಭೂತಿ ಗೌತಮನಿಗೆ ಜ್ಞಾನೋದಯವಾದ ತಾಣವಿದೆ.( ಜೈನ ಧರ್ಮದಲ್ಲಿ ಇದು ಅತ್ಯುತ್ತಮ ಜ್ಞಾನ ಮತ್ತು ಆಧಾತ್ಮಿಕತೆಯ ಮಾರ್ಗವಾಗಿ ಮುಕ್ತಿಯನ್ನು ಹೊಂದುವ ಸಾಧನೆಯಾಗಿದೆ). ಈ ಕ್ಷೇತ್ರಕ್ಕೂ ಭಕ್ತರು ಪೂಜಾಪಾಠಗಳಿಗಾಗಿ ಬರುವುದುಂಟು.