ಪ್ರವಾಸಿಗರು ಇಲ್ಲಿಗೆ ಹೋದಾಗ ಇಲ್ಲಿನ ಪ್ರಸಿದ್ಧ ರಾಘವೇಂದ್ರ ಸ್ವಾಮಿಗಳ ಮಠವನ್ನು ಸಂದರ್ಶಿಸಬಹುದು. ಈ ಮಠವು ಪ್ರಿತೀಕ ಸನ್ನಿಧಿ ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ವಿಶೇಷವೆಂದರೆ ಯಾತ್ರಾರ್ಥಿಗಳು ಸಾಮಾನ್ಯವಾಗಿ ಎಲ್ಲಾ ರಾಯರ ಮಠದಲ್ಲಿ ಕಾಣುವ ಬೃಂದಾವನಕ್ಕೆ ಬದಲಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೂರ್ತಿಯನ್ನು ನಾವು ಇಲ್ಲಿ ಕಾಣಬಹುದು. ಇದು ವಿಶ್ವದಲ್ಲಿಯೇ ಏಕೈಕ ಶ್ರೀ ರಾಘವೇಂದ್ರ ಸ್ವಾಮಿಗಳ ಮೂರ್ತಿ ಎಂದು ಖ್ಯಾತವಾಗಿದೆ. ಈ ಮಠದ ಪೀಠವು ಶ್ರೀ ಮದಾಚಾರ್ಯ ಶ್ರೀ ಸುಜನೇಂದ್ರ ತೀರ್ಥರು 1836 ರಿಂದ 61ರವರೆಗೆ ಪೂಜಿಸಲ್ಪಟ್ಟಿತ್ತು. ಅಲ್ಲದೆ ಇಂದಿಗು ಅದೇ ಮೂಲ ಪರಂಪರೆಯನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ.ಯಾತ್ರಾರ್ಥಿಗಳು ಇಲ್ಲಿನ ಪಂಚ ಬೃಂದಾವನವನ್ನು ಸಹಾ ದರ್ಶಿಸಬಹುದು. ಈ ಬೃಂದಾವನಗಳು ಪ್ರಸಿದ್ಧ ಸಂತರಾದ ಶ್ರೀ ಸುಜನೇಂದ್ರ ತೀರ್ಥರು, ಶ್ರೀ ಸುಬೋಧೇಂದ್ರ ತೀರ್ಥರು, ಶ್ರೀ ಸುಪ್ರಜ್ಞೇಂದ್ರ ತೀರ್ಥರು, ಶ್ರೀ ಸುಜನೇಂದ್ರ ತೀರ್ಥರು ಮತ್ತು ಶ್ರೀ ಸುಕ್ರುತೀಂದ್ರ ತೀರ್ಥರ ಪವಿತ್ರ ಅಸ್ತಿಗಳನ್ನು ತಂದು ಸ್ಥಾಪಿಸಲಾಗಿದೆ.