ಮಹರಾಷ್ಟ್ರದಲ್ಲಿ ಸುಸಜ್ಜಿತವಾಗಿ ಇರಿಸಿರುವ ಕೇಲವೆ ಕೆಲವು ಕೋಟೆಗಳಲ್ಲಿ ಕಂಧರ್ ಕೂಡ ಒಂದು. ಈ ಕೋಟೆಯ ಮುಖ್ಯ ಲಕ್ಷಣವೆಂದರೆ ಇದರ ಸುತ್ತಲು ದೊಡ್ಡ ಕಂದಕವನ್ನು ನಿರ್ಮಿಸಿ ನೀರು ಹರಿಯ ಬಿಡಲಾಗಿದೆ. ವಾಸ್ತುಶಿಲ್ಪದ ಬಗ್ಗೆ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಛಾಯಾಗ್ರಾಹಕರಿಗೆ ಸೂಕ್ತವಾದ ತಾಣವಿದು. ಇದು ನಿಜಾಮ್ ಶಾಹಿ ಕಾಲದ ಕಟ್ಟಡವಾಗಿದ್ದು ರಾಷ್ಟ್ರಕೂಟರ ರಾಜ ಮೂರನೇ ಕೃಷ್ಣನ ಹೆಸರಿನಲ್ಲಿ ನಿರ್ಮಿಸಲಾಗಿದೆ.