ಸೇಂಟ್ ಜಾನ್ ನ ವೈಲ್ಡರ್ನೆಸ್ ಚರ್ಚ್ ಮಲ್ಲಿತಾಲ್ (ನೈನಿತಾಲ್ ಸರೋವರದ ಉತ್ತರದ ತುದಿಯಲ್ಲಿ) ನಲ್ಲಿ ನೆಲೆಗೊಂಡಿರುವ ಒಂದು ಪ್ರಶಾಂತವಾಗಿ ಸ್ಥಳವಾಗಿದೆ. ಈ ಚರ್ಚ್ ಅನ್ನು 1844 ರಲ್ಲಿ ಸ್ಥಾಪಿಸಲಾಯಿತು. ದಾಖಲೆಗಳ ಪ್ರಕಾರ, ಡೇನಿಯಲ್ ವಿಲ್ಸನ್ನ, ಬಿಷಪ್, ಚರ್ಚ್ ಆಫ್ ಕೊಲ್ಕತ್ತಾ ಇದರ ಶಂಕುಸ್ಥಾಪನೆಯನ್ನು ನೆರವೇರಿಸಲು ಇಲ್ಲಿಗೆ ಬಂದಿದ್ದರು ಮತ್ತು ಅನಾರೋಗ್ಯದ ಕಾರಣ ಅವರು ಇಲ್ಲಿನ ಅರಣ್ಯದ ಸಮೀಪದಲ್ಲಿದ್ದ ಒಂದು ಅಪೂರ್ಣ ಮನೆಯಲ್ಲಿ ಇರಬೇಕಾಯಿತು. ಆದ್ದರಿಂದ, ಈ ಚರ್ಚ್, 'ಸೇಂಟ್ ಜಾನ್ ವೈಲ್ಡರ್ನೆಸ್ ಇನ್ ದಿ ಚರ್ಚ್' ಎಂದು ಖ್ಯಾತಿ ಪಡೆಯಿತು. ಈ ಚರ್ಚ್, 1880 ರ ಭೂಕುಸಿತದ ಬಲಿಯಾದವರ ನೆನಪಿನಾರ್ಥದ ಸ್ಮಾರಕವೂ ಆಗಿದ್ದು, ಅಸ್ತಂಗತರಾದವರ ಹೆಸರುಗಳನ್ನು ಇಲ್ಲಿನ ಒಂದು ಹಿತ್ತಾಳೆ ಫಲಕದಲ್ಲಿ ಬರೆದಿಡಲಾಗಿದೆ.