ಜಗನ್ನಾಥ ದೇವಸ್ಥಾನವು ಹಿಮಾಚಲ ಪ್ರದೇಶದ ನಹಾನ್ನಲ್ಲಿರುವ ಪ್ರಮುಖ ಪ್ರವಾಸಿ ತಾಣ. ಈ ಐತಿಹಾಸಿಕ ದೇವಸ್ಥಾನವನ್ನು ರಾಜಾ ಬುದ್ಧ ಪ್ರಕಾಶರವರು 1681ರಲ್ಲಿ ನಿರ್ಮಾಣ ಮಾಡಿದರು. ಈ ದೇವಸ್ಥಾನವು ನೀಲ ಮಾಧವರಿಗೆ ಅರ್ಪಿತವಾಗಿದೆ. ಐತಿಹ್ಯಗಳ ಪ್ರಕಾರ, ದೇವರು ರಾಜಾ ಬುದ್ಧ ಪ್ರಕಾಶರ ಕನಸಿನಲ್ಲಿ ಬಂದು ಪೀಪಲ್ ಮರದ ಬಳಿಯಿರುವ ದೇವಸ್ಥಾನಕ್ಕೆ ಸ್ಥಳಾಂತರಿಸಬೇಕು ಎಂಬ ಸಂದೇಶವನ್ನು ನೀಡಿದರಂತೆ. ಆದ್ದರಿಂದ ಮೂಲ ಪುರಿ ದೇವಸ್ಥಾನಕ್ಕೆ ಹೋಲುವಂತೆ ವಾಸ್ತುಶಿಲ್ಪ ಶೈಲಿಯಲ್ಲಿ ರಾಜ ಈ ದೇವಸ್ಥಾನವನ್ನು ನಿರ್ಮಿಸಿದ.
ಬವನ್ ದ್ವಾದಶಿಯನ್ನು ನಹಾನ್ನಲ್ಲಿ ಮಳೆಗಾಲ ಮುಗಿಯುತ್ತಿದ್ದಂತೆ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸ್ಥಳೀಯ ದೇವರ ಐವತ್ತೆರಡು ಮೂರ್ತಿಗಳನ್ನು ಜಗನ್ನಾಥ ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ. ಈ ಹಬ್ಬದಲ್ಲಿ ನೀರಿನ ಕೊಳದಲ್ಲಿ ಮೂರ್ತಿಗಳನ್ನು ಮುಳುಗಿಸಿ ನಂತರ ಅರ್ಧರಾತ್ರಿಯಲ್ಲಿ ಪುನಹ ಪ್ರತಿಷ್ಠಾಪಿಸಲಾಗುತ್ತದೆ.