ಜನಪ್ರಿಯ ಆಕರ್ಷಣೆಗಳಲ್ಲಿ ಒಂದಾಗಿರುವ, ರಾಜಸ್ಥಾನದ ನಗೌರ್ ನಲ್ಲಿರುವ ಈ ತಾಣವು ಸಂತ ಶ್ರೀ ಸಾಯಿಜಿ ಮಹಾರಾಜ್ ಅವರ ಸಮಾಧಿಯಾಗಿದೆ. ಸ್ಥಳೀಯರ ಪ್ರಕಾರ, ಈ ಸಂತರು ತಮ್ಮ ಇಡೀ ಜೀವನವನ್ನು ಭಗವಂತನ ನಾಮಸ್ಮರಣೆಯಲ್ಲಿ ಕಳೆದಿದ್ದಾರೆ. ಈ ಕಾರಣದಿಂದಾಗಿ ರಜಪೂತ್ ವಂಶದ ಸದಸ್ಯರಾದ ಠಾಕೂರರು ಇವರನ್ನು, ದುಷ್ಟ ಆತ್ಮಗಳಿಂದ ಮುಕ್ತಗೊಳಿಸಲು ಈ ಸ್ಥಳಕ್ಕೆ ಆಹ್ವಾನಿಸಿದ್ದರೆನ್ನಲಾಗಿದೆ. ಈ ಸಮಾಧಿಗೆ ಬಹುಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.