ನಾಗರ್ಜುನಸಾಗರ್ ಅಣೆಕಟ್ಟು, ಅದರ ಉದ್ಘಾಟನೆಯ ಸಮಯದಲ್ಲಿ ಕಲ್ಲು ಮತ್ತು ಇಟ್ಟಿಗೆಗಳಿಂದ ನಿರ್ಮಿಸಲಾದ ಪ್ರಪಂಚದ ಅತಿದೊಡ್ಡ ಅಣೆಕಟ್ಟಾಗಿತ್ತು. ಈ ಅಣೆಕಟ್ಟನ್ನು ಆಂಧ್ರ ಪ್ರದೇಶದ ನಲಗೊಂಡ ಜಿಲ್ಲೆಯ ನಾಗರ್ಜುನಸಾಗರ ಪಟ್ಟಣಕ್ಕೆ ಅತಿ ಸಮೀಪದಲ್ಲಿ ನಿರ್ಮಿಸಲಾಗಿದೆ.
ಕೃಷ್ಣ ನದಿಗೆ ನಿರ್ಮಿಸಲಾದ ಈ ಅಣೆಕಟ್ಟು ಯೋಜನೆಯನ್ನು 1955 ರಲ್ಲಿ ಪ್ರಾರಂಭಿಸಿ 1967 ರಲ್ಲಿ ಪೂರ್ಣಗೊಳಿಸಲಾಯಿತು. ನಾಗರ್ಜುನಸಾಗರ್ ಅಣೆಕಟ್ಟು 11.472 ದಶಲಕ್ಷ ಘನ ಮೀಟರ್ ನಷ್ಟು ಜಲಾಶಯವನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 490 ಅಡಿ ಎತ್ತರ ಹಾಗೂ 1.6 ಕಿಮೀ ಉದ್ದವಿದ್ದು ಸಂದರ್ಶಕರಿಗೆ ಒಂದು ರಮಣೀಯ ನೋಟವನ್ನು ನೀಡುತ್ತದೆ. ಒಟ್ಟು 26 ಗೇಟಗಳನ್ನು ಹೊಂದಿದ್ದು ಅವು 42 ಅಡಿ ಅಗಲ ಮತ್ತು 45 ಅಡಿ ಉದ್ದವಾಗಿವೆ.
ಈ ಅಣೆಕಟ್ಟು ಭಾರತದ ಇತಿಹಾಸದಲ್ಲಿ ಬಹಳಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಇದು ದೇಶದ ಹಸಿರು ಕ್ರಾಂತಿಯ ಭಾಗವಾಗಿ ಆರಂಭಿಸಿದ ಮೊದಲ ಯೋಜನೆಯಾಗಿತ್ತು. ಇದು ನೀರಾವರಿ ಉದ್ದೇಶಕ್ಕಾಗಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಜಲವಿದ್ಯುತ್ ಒದಗಿಸಲು ಬಳಸಲಾದ ಮೊಟ್ಟ ಮೊದಲ ಅಣೆಕಟ್ಟಾಗಿದೆ.