ಶಿವನಿಗೆ ಮುಡಿಪಾಗಿರುವ ತಮಿಳುನಾಡಿನ ಈ ಜನಪ್ರಿಯ ಪುರಾತನ ದೇವಾಲಯವನ್ನು ನೀಲಾಯದಾಕ್ಷಿ ಎಂದೂ ಸಹ ಕರೆಯಲಾಗುತ್ತದೆ. ದೇವಾಲಯದ ಆವರಣದಲ್ಲಿ ಶಿವ ಹಾಗು ನೀಲಾಯದಾಕ್ಷಿಯರ ವಿಗ್ರಹಗಳನ್ನು ಕಾಣಬಹುದು. ಪುಂಡರಿಯು ಇಲ್ಲಿಯೆ ಶಿವನ ದರುಶನ ಪಡೆದು ಮೋಕ್ಷ ಹೊಂದಿದರು ಎಂದು ನಂಬಲಾಗುತ್ತದೆ. ಅಷ್ಟೆ ಅಲ್ಲ, ಮರಣಿಸಿದವರು ಕೂಡ ಈ ದೇವಾಲಯದಲ್ಲಿ ಮೋಕ್ಷ ಹೊಂದುತ್ತಾರೆ ಎಂದು ನಂಬಲಾಗಿದೆ. ಕಳೆಬರವನ್ನು ದೇವಾಲಯದಲ್ಲಿ ದೊರೆಯುವ ಪವಿತ್ರ ಬಟ್ಟೆಯಿಂದು ಮುಚ್ಚಲಾಗುತ್ತದೆ ಹಾಗು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ಒಂದು ವಿಧಾನದಿಂದ ಪ್ರಾಣ ತ್ಯಜಿಸಿದವರು ಮೋಕ್ಷವನ್ನು ಪಡೆಯುತ್ತಾರೆ ಎನ್ನಲಾಗುತ್ತದೆ.