ನಾಗಪಟ್ಟಿನಂ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಪೊರುಲ್ವೈತಚೇರಿ ಎಂಬ ಹಳ್ಳಿಯಲ್ಲಿ ನೆಲೆಸಿದೆ ಈ ಪ್ರಸಿದ್ಧ ಅರುಮುಗಸ್ವಾಮಿ ದೇವಾಲಯ. ಭಗವಾನ್ ಸುಬ್ರಹ್ಮಣ್ಯಸ್ವಾಮಿಯು ನವಿಲಿನೊಡನೆ ನಿಂತಿರುವ ಸುಂದರವಾದ ವಿಗ್ರಹವು ಈ ದೇವಾಲಯದಲ್ಲಿದೆ. ದಂತಕಥೆಯ ಪ್ರಕಾರ, ರಾಜನು ಶಿಲ್ಪಿಯ ಈ ಸುಂದರವಾದ ರಚನೆಯಿಂದ ವಿಸ್ಮಿತಗೊಂಡು ಅವನಿಗೆ ಅಪಾರವಾದ ಸಂಪತ್ತನ್ನು ಕೊಟ್ಟನಂತೆ ಹಾಗು ಆತನಿಂದ ಮುಂದೆಂದೂ ಇಂತಹ ಕಲಾಕೃತಿ ರೂಪಗೊಳ್ಳಬಾರದೆಂಬ ಉದ್ದೇಶದಿಂದ ಅವನ ಹೆಬ್ಬೆರಳುಗಳನ್ನು ನಾಶಪಡಿಸಿದನಂತೆ.