ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ನಗರದಿಂದ ಕೇವಲ 20 ಕಿಮೀ ದೂರದಲ್ಲಿರುವ ಬೃಂದಾವನ ಹೂದೋಟವನ್ನು ಹೋಗಿ ನೋಡಲೇಬೇಕು. ಹಿಂದೆ ಕೃಷ್ಣರಾಜೇಂದ್ರ ಟೆರೇಸ್ ಗಾರ್ಡನ್ ಎಂದು ಕರೆಯಲ್ಪಡುತ್ತಿದ್ದ ಬೃಂದಾವನವೂ ಕೃಷ್ಣರಾಜಸಾಗರ ಆಣೆಕಟ್ಟಿನ ಕೆಳಭಾಗದಲ್ಲೇ ಇದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ನಿಂದ ಅದರ ಹೆಸರನ್ನು ಪಡೆದುಕೊಂಡಿದೆ. ಇದನ್ನು 1924 –1932ರ ಅವಧಿಯಲ್ಲಿ ಸರ್ ಎಮ್ ವಿಶ್ವೇಶ್ವರಯ್ಯನವರು ನಿರ್ಮಿಸಿದರು.ಕಾಶ್ಮೀರದ ಶಾಲಿಮಾರ್ ಗಾರ್ಡನ್ ನ ಮೂಲ ಹೊಂದಿದ ಬೃಂದಾವನವೂ ಅರವತ್ತು ಎಕರೆಗಳ ಜಾಗದಲ್ಲಿ ಚಾಚಿಕೊಂಡಿದೆ. ಇಲ್ಲಿ ಸುಂದರವಾದ ಹೂ ಹಾಸಿಗೆ, ಹುಲ್ಲು ಹಾಸು,ಮರಗಳು, ಸಣ್ಣ ಕೊಳಗಳು ಮತ್ತು ಚಿಲುಮೆಗಳನ್ನು ಕಾಣಬಹುದು. ಪ್ರವಾಸಿಗರು ಉದ್ಯಾನವನದ ಮಧ್ಯಭಾಗದಲ್ಲಿರುವ ಕೆರೆಯಲ್ಲಿ ಕಾವೇರಿಯ ಪ್ರತಿಮೆಯ ಸುತ್ತ ದೋಣಿ ವಿಹಾರದಲ್ಲಿ ತೆರಳಬಹುದು. ಸಂದರ್ಶಕರು ಹೂದೋಟದ ಉತ್ತರಭಾಗದಲ್ಲಿ ಪ್ರದರ್ಶನ ಕೇಂದ್ರದ ಸಮೀಪ ಇರುವ ಸಂಗೀತದ ತಾಳಕ್ಕೆ ತಕ್ಕಂತೆ ಕುಣಿಯುವ ಬಣ್ಣದ ನೀರಿನಚಿಲುಮೆಯನ್ನು ನೋಡಲೇಬೇಕು .ಹೂದೋಟದಲ್ಲಿ ಮನವೊಲಿಸುವಂತಹ ಬೆಳಕಿನ ಆಯೋಜನವನ್ನು ಸೋಮವಾರ –ಶುಕ್ರವಾರವರೆಗೆ ಸುಮಾರು 7-8 ಗಂಟೆಗಳ ಕಾಲ ಮತ್ತು ಶನಿವಾರ ಹಾಗೂ ಭಾನುವಾರ 7- 9 ಗಂಟೆಗಳವರೆಗೆ ಕಾಣಬಹುದು.