ಮೈಸೂರು ಅರಮನೆಯು ಅತಿ ಪ್ರಸಿದ್ಧಿಯನ್ನು ಹೊಂದಿದ್ದು, ಮೈಸೂರು ನಗರಕ್ಕೆ ಭೇಟಿ ಕೊಡುವ ಎಲ್ಲ ಪ್ರವಾಸಿಗರಲ್ಲೂ ಅತ್ಯಂತ ಸೂಚಿತ ಸ್ಥಳವಾಗಿದೆ. ಅರಮನೆಯಲ್ಲಿ ಇಂಡೋ-ಅರೇಬಿಯನ್, ದ್ರಾವಿಡ, ರೋಮನ್ ಮತ್ತು ಓರಿಯೆಂಟಲ್ ವಾಸ್ತುಶಿಲ್ಪ ಶೈಲಿಗಳು ಪ್ರದರ್ಶಿತವಾಗಿದೆ. ಮೂರು ಗುಲಾಬಿ ಅಮೃತಶಿಲೆ ಗುಮ್ಮಟಗಳನ್ನು ಹೊಂದಿರುವ ಈ ಕಟ್ಟಡದ...
ಚಾಮುಂಡಿ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 1065 ಮೀ.ನಷ್ಟು ಎತ್ತರದಲ್ಲಿ ನೆಲೆಸಿದ್ದು, ಮೈಸೂರಿಗೆ ಬರುವ ಪ್ರವಾಸಿಗರು ಇಲ್ಲಿಗೆ ಒಮ್ಮೆ ಭೇಟಿ ನೀಡಲೇಬೇಕು. ಚಾಮುಂಡಿ ಬೆಟ್ಟದ ಮೇಲೆ ವೊಡೆಯರ ದೇವತೆಯಾದ, ಪಾರ್ವತಿಯ ಅವತಾರಿಣಿ ತಾಯಿ ಚಾಮುಂಡೇಶ್ವರಿಯ ದೇವಾಲಯವಿದೆ.
ಈ ದೇವಾಲಯವನ್ನು 11ನೇ ಶತಮಾನದಲ್ಲಿ...
ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ನಗರದಿಂದ ಕೇವಲ 20 ಕಿಮೀ ದೂರದಲ್ಲಿರುವ ಬೃಂದಾವನ ಹೂದೋಟವನ್ನು ಹೋಗಿ ನೋಡಲೇಬೇಕು. ಹಿಂದೆ ಕೃಷ್ಣರಾಜೇಂದ್ರ ಟೆರೇಸ್ ಗಾರ್ಡನ್ ಎಂದು ಕರೆಯಲ್ಪಡುತ್ತಿದ್ದ ಬೃಂದಾವನವೂ ಕೃಷ್ಣರಾಜಸಾಗರ ಆಣೆಕಟ್ಟಿನ ಕೆಳಭಾಗದಲ್ಲೇ ಇದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ನಿಂದ ಅದರ ಹೆಸರನ್ನು ಪಡೆದುಕೊಂಡಿದೆ....
ಮೈಸೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅಲ್ಲಿನ ಪುರಾತನ ಕಟ್ಟಡಗಳ ಪಟ್ಟಿಯಲ್ಲಿ ಒಂದಾದ ಜಗನ್ಮೋಹನ ಅರಮನೆಯನ್ನು ಹೋಗಿ ನೋಡಬಹುದು. ಈ ಸ್ಥಳವನ್ನು ಮೈಸೂರಿನ ಅರಸರು 1861ರಲ್ಲಿ ನಿರ್ಮಿಸಿದರು ಮತ್ತು 1897ರಲ್ಲಿ ಹಳೆಯ ಮರದ ಅರಮನೆಯೂ ಬೆಂಕಿಗಾಹುತಿಯಾದ ಸಂದರ್ಭದಲ್ಲಿ ಹೊಸ ಅರಮನೆಯನ್ನು ಕಟ್ಟುವವರೆಗೂ ಒಂದು ಅರಸ ಕುಟುಂಬದ...
ಸಮಯಾವಕಾಶವಿದ್ದರೆ, ಮೈಸೂರಿನಲ್ಲಿರುವ 1979 ರಲ್ಲಿ ಅಸ್ತಿತ್ವಕ್ಕೆ ಬಂದ ರೈಲು ವಸ್ತುಸಂಗ್ರಹಾಲಯಕ್ಕೆ ಪ್ರವಾಸಿಗರು ಒಮ್ಮೆ ಭೇಟಿ ನೀಡಬಹುದು. ಈ ವಸ್ತು ಸಂಗ್ರಹಾಲಯದ ಚಾಮುಂಡಿ ಪ್ರದರ್ಶನಾ ಘಟಕದಲ್ಲಿ ರೈಲುಮಾರ್ಗದ ಉನ್ನತೀಕರಣ ಮತ್ತು ವಿಸ್ತರೀಕರಣದ ಸವಿಸ್ತಾರವಾದ ವಿವರಗಳನ್ನು ಕಾಣಬಹುದು.
ಪ್ರವಾಸಿಗರು 'ಶ್ರೀ ರಂಗಾ...
ಪ್ರವಾಸಿಗರು ಮೈಸೂರಿಗೆ ಹೋದ ಸಂದರ್ಭದಲ್ಲಿ ಹೋಗಿ ನೋಡಲೇಬೇಕಾದ ಸ್ಥಳ ಮೇಣದ ವಸ್ತು ಸಂಗ್ರಹಾಲಯ – ಸುಮದುರ ಜಗತ್ತು. ಈ ವಸ್ತು ಸಂಗ್ರಹಾಲಯವನ್ನು 2010ರಲ್ಲಿ ಕೇವಲ ಸಂಗೀತ ಮತ್ತು ಸಂಗೀತ ವಾದ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಲಾಯಿತು. ಈ ಸಂಗ್ರಹಾಲಯವು 100 ಸಹಜ ಗಾತ್ರದ ಮೇಣದ ಪ್ರತಿಮೆಗಳನ್ನು...
ಮೈಸೂರಿಗೆ ಪ್ರವಾಸ ಮಾಡುವ ಪ್ರವಾಸಿಗರು ಅಲ್ಲಿ ನೋಡಲೇಬೇಕಾದ ಮತ್ತೊಂದು ಸ್ಥಳ ಮೈಸೂರು ಮೃಗಾಲಯ. ಮೈಸೂರು ಮೃಗಾಲಯ 1892ರಲ್ಲಿ ಮಹಾರಾಜ ಚಾಮರಾಜ ಒಡೆಯರ್ ರವರು ನಿರ್ಮಿಸಿದ್ದು ಭಾರತದಲ್ಲಿನ ನೆಚ್ಚಿನ ಪ್ರಾಣಿ ಸಂಗ್ರಹಾಲಯಗಳಲ್ಲಿ ಒಂದೆಂದು ಗುರುತಿಸಲಾಗಿದೆ. 250 ಎಕ್ಕರೆ ಪ್ರದೇಶದಲ್ಲಿ ಚಾಚಿಕೊಂಡಿರುವ್ ಇದು ವೈವಿಧ್ಯಮಯ ಮತ್ತು...
ಚಾಮುಂಡಿ ಬೆಟ್ಟದ ಮೇಲೆ ನೆಲೆಸಿರುವ ಲಲಿತ ಮಹಾಲ್ ಪ್ರವಾಸಿಗರು ಒಮ್ಮೆ ಯಾದರೂ ನೋಡಲೆಬೇಕಾದ ಸುಂದರವಾದ ಪಾರಂಪರಿಕ ಕಟ್ಟಡ. ಈ ಮಹಲನ್ನು ನಾಲ್ವಡಿ ಕೃಷ್ಣ ರಾಜ ರಾಜ ಒಡೆಯರವರು 1921ರಲ್ಲಿ ಭಾರತದ ವೈಸರಾಯ್ ರವರಿಗಾಗಿ ನಿರ್ಮಿಸಿದರು. ಮುಂಬೈನ ಈ ಡಬಲ್ಯು. ಫ್ರೀಚ್ಲೀರವರು ನವೀನ ವಾಸ್ತುಶೈಲಿಯ ಜೊತೆಗೆ ಆಂಗ್ಲರ ಮನೆಗಳ ಮತ್ತು...
ಪ್ರವಾಸಿಗರು ಸುಂದರವಾದ ಜಯಲಕ್ಷ್ಮಿ ವಿಲಾಸ್ ಬಂಗಲೆಯಲ್ಲಿರುವ ಜಾನಪದ ಸಂಗ್ರಹಾಲಯಕ್ಕೆ ಮೈಸೂರಿಗೆ ಹೋದ ಸಂದರ್ಭದಲ್ಲಿ ಭೇಟಿ ನೀಡಬಹುದು. 1968 ರಲ್ಲಿ ಸ್ಥಾಪಿತವಾಗಿರುವ ಸಂಗ್ರಹಾಲಯದಲ್ಲಿ 650ಕ್ಕೂ ಹೆಚ್ಚು ಜಾನಪದ ವಸ್ತುಗಳನ್ನು, ಕೈಗೊಂಬೆಗಳನ್ನು, ದಕ್ಷಿಣಭಾರತದ ಆಟಿಕೆಗಳನ್ನು ಮತ್ತು ಗೃಹಬಳಕೆಯ ವಸ್ತುಗಳನ್ನು ಹೊಂದಿದೆ....
ಮೈಸೂರಿಗೆ ಭೇಟಿ ಕೊಡುವ ಸಂದರ್ಭದಲ್ಲಿ ಪ್ರವಾಸಿಗರು ಸಂತ ಜೋಸೆಫ್ ಚರ್ಚ್ ಎಂದೂ ಕರೆಯಲ್ಪಡುವ ಸಂತ ಫಿಲೋಮಿನಾರ ಚರ್ಚ್ ಗೆ ಒಮ್ಮೆ ಭೇಟಿ ಕೊಡಲೇಬೇಕು. ಈ ಪ್ರಾಚೀನ ಕಾಲದ ಬೃಹತ್ತಾದ ಚರ್ಚ್ ನನಿರ್ಮಾಣವು 1933ರಲ್ಲಿ ಮೂರನೇ ಮಹಾರಾಜ ಕೃಷ್ಣ ರಾಜ ಒಡೆಯರ ಅಡಿಯಲ್ಲಿ ಆರಂಭಗೊಂಡು 1941ರಲ್ಲಿ ಪೂರ್ಣಗೊಂಡಿತು. ಈ ಚರ್ಚ್ ಗೋತಿಕ್ ಶೈಲಿಯ...
ಮೈಸೂರಿನ ಅತ್ಯಂತ ಸೂಂದರವಾದ ಪಾರಂಪರಿಕಾ ಕಟ್ಟಡಗಳಲ್ಲಿ ಒಂದೆನಿಸಿದ ಜಯಲಕ್ಷ್ಮಿ ವಿಲಾಸ್ ಬಂಗಲೆಯನ್ನು ಎಲ್ಲಾ ಪ್ರವಾಸಿಗರೂ ಒಮ್ಮೆ ಹೋಗಿ ನೋಡಬೇಕಾಗಿ ನಮ್ಮ ವಿನಂತಿ. ಈ ಬಂಗಲೆಯು ಮೈಸೂರು ವಿಶ್ವವಿದ್ಯಾನಿಲಯದ ಆವರಣವಾಗಿರುವ ಹಚ್ಚ ಹಸಿರಿನಿಂದ ಸುಂದರವಾಗಿರುವ ಮಾನಸ ಗಂಗೋತ್ರಿಯಿಂದ ಸುತ್ತುವರೆದಿದ್ದು ಒಂದು ಬೆಟ್ಟದ ಮೇಲೆ...
ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಸಮಯವಿದ್ದಲ್ಲಿ ಹ್ಯಾಪಿ ಮ್ಯಾನ್ ಉದ್ಯಾನವನಕ್ಕೆ ಒಮ್ಮೆ ಹೋಗಿಬರಬಹುದು. ಈ ಉದ್ಯಾನವನವು ಮಕ್ಕಳು ಮತ್ತು ಹಿರಿಯರು ಕಾಲಕಳೆಯ ಬಯಸುವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಸಣ್ಣ ಉದ್ಯಾನವನವೂ ಒಂದು ಕಿರಿದಾದ ಪ್ರಾಣಿ ಸಂಗ್ರಹಾಲಯವನ್ನು ಹೊಂದಿದ್ದು ಪ್ರವಾಸಿಗರು ಅನೇಕ ಸಂಖ್ಯೆಯಲ್ಲಿ ಕೋಳಿ...
1891ರಲ್ಲಿ ಸ್ಥಾಪಿಸಲಾಗಿರುವ ಓರಿಯಂಟಲ್ ಸಂಶೋಧನಾ ಸಂಸ್ಥೆಯನ್ನು ಮೈಸೂರಿಗೆ ಹೋಗುವ ಪ್ರವಾಸಿಗರು ಒಮ್ಮೆ ಭೇಟಿ ಕೊಟ್ಟು ನೋಡಬೇಕಾದ ಸ್ಥಳ. ಇದನ್ನು ಮೈಸೂರಿನ ಮಹಾರಾಜ ಸರ್ಕಾರವು ನಿರ್ಮಿಸಿದರು. ಮುಖ್ಯ ಉದ್ಧೇಶ ಹಳೆಯ ಸಂಸ್ಕೃತ ಮತ್ತು ಹಾಲೋಗ್ರಾಫ್ ಗಳನ್ನು ಸಂಗ್ರಹಿಸಿ, ಬದಲಿಸಿ, ಪ್ರಕಾಶಿಸಿ ಮತ್ತು ಕಾಯ್ದುಕೊಳ್ಳುವುದು....
ಸುಂದರವಾದ ವಿಹಾರಕ್ಕೆ ಸೂಕ್ತವಾದ 180ಕ್ಕೂ ಹೆಚ್ಚು ಮೈಸೂರಿನ ಉದ್ಯಾನವನ ಮತ್ತು ಹೂದೋಟಗಳು ಪ್ರವಾಸಿಗರಿಗೆ ಭೇಟಿ ನೀಡಲು ಸೂಕ್ತವಾಗಿವೆ. ಸಣ್ಣ ಉದ್ಯಾನವನಗಳಾದ ಜಯನಗರದ ಅಂಬೇಡ್ಕರ್ ಉದ್ಯಾನವನದಲ್ಲಿ 500 ಮೀ ನಷ್ಟು ಉದ್ದದ ಕಾಲುದಾರಿಯಿದ್ದು ವಾಸದ ಮನೆಗಳ ಪ್ರದೇಶದಲ್ಲಿ ಬೆಳೆಸಿದೆ. ಕುವೆಂಪು ನಗರದಲ್ಲಿರುವ ಆಂದೋಲನ್ ವೃತ್ತ...
ಪ್ರವಾಸಿಗರು ತಮ್ಮ ಮೈಸೂರಿನ ಭೇಟಿಯ ಸಮಯದಲ್ಲಿ ಸ್ಥಳೀಯ ಪ್ರಕೃತಿಯ ಇತಿಹಾಸ ವಸ್ತು ಸಂಗ್ರಹಾಲಯಕ್ಕೊಮ್ಮೆ ಭೇಟಿ ಕೊಡಬಹುದು. ಈ ವಸ್ತು ಸಂಗ್ರಹಾಲಯವು ಚಾಮುಂಡಿ ಬೆಟ್ಟದ ಅಡಿಯಲ್ಲಿ ಕಾರಂಜಿ ಕೆರೆಯ ದಂಡೆಯ ಮೇಲೆ ನೆಲೆಸಿದೆ. 1995ರ ಮೇ 20ರಂದು ಉದ್ಘಾಟನೆಗೊಂಡ ಈ ವಸ್ತು ಸಂಗ್ರಹಾಲಯವು ನಿಸರ್ಗ ಮಾತೆಗೆ ಸಮರ್ಪಿತವಾಗಿದ್ದು ಹೂಗಳು,...