ಶುಕ್ರತಲವು, ಮುಜಫರ್ ಜಿಲ್ಲೆಯ ಜನಜನಿತವಾದ ಧಾರ್ಮಿಕ ಸ್ಥಳವಾಗಿದೆ. ಮಹರ್ಷಿ ಶುಕನು ಭಗವದ್ ಪುರಾಣವನ್ನು ಪರೀಕ್ಷಿತ ಮಹಾರಾಜನಿಗೆ, ಆತನು ಹಾವಿನಿಂದ ಕಚ್ಚಲ್ಲ್ಪಟ್ಟು ಸಾವಿಗೀಡಾಗುವ ಮುನ್ನ ಸತತ 7 ದಿನಗಳ ಕಾಲ ಈ ಸ್ಥಳದಲ್ಲಿಯೇ ಭೋದಿಸಿದನು ಎಂದು ಸ್ಮೃತಿಗಳು ಸಾರುತ್ತವೆ. ಈ ವಿದ್ಯಮಾನಕ್ಕೆ ಸಾಕ್ಷೀಭೂತವಾದ, ಸುಪ್ರಸಿದ್ಧವಾದ, ಸಾವಿಲ್ಲದ, ಆಲದಮರವೊಂದು (ಅಕ್ಷಯ ವಟ್ ವೃಕ್ಷ್) ಇಲ್ಲಿದ್ದು, ಸಾವಿರಾರು ಭಕ್ತಾದಿಗಳು, ಪ್ರತಿವರ್ಷ, ಈ ವೃಕ್ಷವನ್ನು ಪರಿಕ್ರಮಿಸಲು ಆಗಮಿಸುತ್ತಾರೆ.