ಪ್ರವಾಸಿಗರು ಚುಂಚಿ ಜಲಪಾತಕ್ಕೆ ಮಳೆಗಾಲದಲ್ಲಿ ಭೇಟಿ ನೀಡಬಹುದು. ಇಲ್ಲಿ ಭೇಟಿ ನೀಡಿದಾಗ ತೆಪ್ಪದಲ್ಲಿ ಕಾವೇರಿ ನದಿ ನೀರಿನಲ್ಲಿ ಸುಂದರ ಪ್ರಕೃತಿಯನ್ನು ನೋಡಬಹುದು. ಮೊದಲು ತೆಪ್ಪಗಳನ್ನು ಇಲ್ಲಿ ಪ್ರಯಾಣಕ್ಕೆ ಬಳಸುತ್ತಿದ್ದರು. ಈಗ ಪ್ರವಾಸಿಗರಿಗಾಗಿ ಹಲವಾರು ತೆಪ್ಪಗಳು ಇಲ್ಲಿ ಕಾವೇರಿ ನದಿ ವಿಹಾರಕ್ಕೆಂದು ಸಿಗುತ್ತವೆ. ತೆಪ್ಪದಲ್ಲಿ ವಿಹಾರ ಮಾಡುತ್ತ ಇಲ್ಲಿನ ಕಾಡಿನಲ್ಲಿರುವ ಬಿದಿರು ಗಿಡಗಳು ಮತ್ತಿತರ ಪ್ರಾಣಿ ಪಕ್ಷಿಗಳನ್ನು ಪ್ರವಾಸಿಗರು ನೋಡಬಹುದು.