ಮುತ್ತತ್ತಿ ಬಳಿ ಇರುವ ಅರ್ಕಾವತಿ ನದಿಯಿಂದ ಹರಿಯುವ ನೀರು ಚುಂಚಿ ಜಲಪಾತದ ಮೂಲಕ ಕಾವೇರಿ ನದಿಯನ್ನು ಸೇರುತ್ತದೆ. ಈ ಚುಂಚಿ ಜಲಪಾತವು ನೋಡಲು ರಮಣೀಯವಾಗಿರುವುದರಿಂದ ಪ್ರವಾಸಿಗರು ಇಲ್ಲಿ ಭೇಟಿ ನೀಡಬಹುದು. ಈ ಜಲಪಾತವು ದಟ್ಟವಾದ ಹಸಿರು ಹಾಸಿನಲ್ಲಿ ಮತ್ತು ರಮಣೀಯ ಅರಣ್ಯದಲ್ಲಿ ಇರುವುದರಿಂದ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ. ಈ ಪ್ರದೇಶದಲ್ಲಿ ಪ್ರವಾಸಿಗರು ಸುಂದರ ಸುಮಧುರ ಕ್ಷಣಗಳನ್ನು ಕಳೆಯಬಹುದು.