ದತ್ತಾತ್ರೇಯ ದೇವಾಲಯ ಎಂಬುದು ಒಂದು ಪವಿತ್ರ ದೇವಾಲಯವಾಗಿದ್ದು, ದತ್ತಾತ್ರೇಯ ದೇವರಿಗಾಗಿ ನಿರ್ಮಾಣ ಮಾಡಲಾಗಿದೆ. ಮುರುದ್ ನಲ್ಲಿರುವ ಈ ದೇವಾಲಯದಲ್ಲಿ ದತ್ತಾತ್ರೇಯ ಸ್ವಾಮಿಗೆ ಮೂರು ಶಿರಗಳಿರುವಂತೆ ಕೆತ್ತಲಾಗಿದೆ. ಈ ಮೂರು ಶಿರಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಪ್ರತಿನಿಧಿಸುತ್ತದೆ.
ಈ ದೇವಾಲಯವನ್ನು ಸ್ವಾಮಿ ಬ್ರಹ್ಮೇಂದ್ರರು ಸ್ಥಾಪಿಸಿದರು. ಇಲ್ಲಿ ಹಲವು ಶತಮಾನಗಳ ಹಿಂದೆ ಪವಿತ್ರ ಪಾದರಕ್ಷೆಗಳನ್ನು ಸಹ ಸ್ಥಾಪಿಸಲಾಗಿದೆ. ಈ ಪಾದರಕ್ಷೆಗಳನ್ನು ಕನ್ನಡದಲ್ಲಿ ಪಾದುಕೆಗಳು ಎಂದು ಕರೆಯಲಾಗುತ್ತದೆ. ಈ ಪಾದುಕೆಗಳಿಗೆ ಭಕ್ತಾಧಿಗಳು ಅತ್ಯಂತ ಭಕ್ತಿ ಭಾವಗಳಿಂದ ಪೂಜಿಸುತ್ತಾರೆ.