ಕಸ್ತಾರನಿ ಘಾಟ್ನ ಉಲ್ಲೇಖವನ್ನು ವಾಲ್ಮೀಕಿ ರಾಮಾಯಣದಲ್ಲಿ ಕಾಣಬಹುದು. ಇದರ ಪ್ರಕಾರ ರಾಮ ಲಕ್ಷ್ಮಣರು ರಾಕ್ಷಸನಾದ ತಾರಕನನ್ನು ಕೊಂದ ನಂತರ ಹಿಂತಿರುಗುವ ಹಾದಿಯಲ್ಲಿ ಈ ಪ್ರದೇಶದಲ್ಲಿ ವಿಶ್ರಮಿಸಿದ್ದರಂತೆ. ರಾಮ ಸೀತೆಯನ್ನು ವಿವಾಹವಾದ ನಂತರ ಮಿಥಿಲೆಯಿಂದ ಅಯೋಧ್ಯೆಗೆ ಹಿಂತಿರುಗುವ ಹಾದಿಯಲ್ಲಿ ಈ ಘಾಟಿನ ಮೂಲಕ ಹಾದು ಹೋಗುವಾಗ ಅವನ ಸಹಚರರು ಇಲ್ಲಿ ತಂಗಿ ಈ ಘಾಟಿನಲ್ಲಿ ಸ್ನಾನ ಮಾಡಿದ್ದರಂತೆ. ಇಲ್ಲಿ ಪ್ರಚಲಿತವಿರುವ ನಂಬಿಕೆಯ ಪ್ರಕಾರ ಈ ಘಾಟಿನಲ್ಲಿ ಸ್ನಾನ ಮಾಡಿದರೆ ರೋಗ-ರುಜಿನಗಳು, ಪಾಪಗಳು ಪರಿಹಾರವಾಗಿ ದೇಹ ಮತ್ತು ಮನಸ್ಸು ಶುದ್ಧಗೊಳ್ಳುತ್ತದೆಯಂತೆ. ಇದು ಧಾರ್ಮಿಕ ಸ್ಥಳವಾಗಿ ಮಾತ್ರವಲ್ಲ ತನ್ನ ಪ್ರಕೃತಿ ಸೌಂದರ್ಯಕ್ಕಾಗಿ ಕೂಡ ಪ್ರವಾಸಿಗರ ಪ್ರಿಯ ತಾಣವಾಗಿದೆ. ಈ ಘಾಟಿಯ ನೀರು ಉತ್ತರದಿಕ್ಕಿಗೆ ಹರಿಯುವುದರಿಂದ ಇದು ಉತ್ತರವಾಹಿನಿ ಗಂಗಾ ಎಂದು ಕೂಡ ಪ್ರಸಿದ್ಧವಾಗಿದೆ.