ಈ ದೇವಾಲಯವು ಮೊರಾದಾಬಾದ್ ಮತ್ತು ಆಗ್ರಾ ನಡುವಿನ ಹೆದ್ದಾರಿಯಲ್ಲಿದ್ದು ಇದು ಬಹುಜಾಯಿಂದ ಆರು ಕಿಲೋಮೀಟರ್ ದೂರದಲ್ಲಿರುವ ಚಿಕ್ಕ ಗ್ರಾಮವಾದ ಸದಾತ್ ಬಾಡಿ ಎಂಬಲ್ಲಿದೆ. ಇಲ್ಲಿನ ಮುಖ್ಯ ದೇವರು ಶಿವ. ಈ ದೇವರು ತನ್ನ ನಂಬಿಕೊಂಡು ಬರುವ ಭಕ್ತರು ನಿರ್ಮಲ ಮನಸ್ಸಿನಿಂದ ಅರ್ಪಿಸಿದ ಯಾವುದೇ ಕಾಣಿಕೆಯನ್ನು ಸ್ವೀಕರಿಸುತ್ತಾನೆ ಎಂಬ ನಂಬಿಕೆಯಿದೆ. ಹಾಲಿನಿಂದ ಶುರುವಾಗಿ ಮದ್ಯದ (ಭಾಂಗ್) ಕಾಣಿಕೆಯನ್ನು ಕೂಡಾ ದೇವರಿಗೆ ಅರ್ಪಿಸಲಾಗುತ್ತದೆ.
ಇಲ್ಲಿ ಅಕ್ಕಪಕ್ಕದಲ್ಲಿ ವಾಸ ಮಾಡುವ ಜನರು ತಾವು ಅರ್ಪಿಸುವ ಕಾಣಿಕೆಯಲ್ಲಿ ಒಂದು ವಿಶೇಷವಾದ ಕಾಣಿಕೆಯಲ್ಲಿ ಒಂದು ವಿಶೇಷವಾದ ಕಾಣಿಕೆಯನ್ನು ತಮ್ಮ ಇಷ್ಟ ದೇವತೆಗೆ ಅರ್ಪಿಸುತ್ತಾರೆ. ಅದು ಯಾವುದೆಂದರೆ ಪೊರಕೆ. ಇದು ಕೂಡಾ ದೇವರಿಗೆ ಅರ್ಪಿಸಲಾಗುವ ವಿಧವಿಧವಾದ ಕಾಣಿಕೆಯಲ್ಲಿ ಒಂದಾಗಿದೆ.
ಪಾತಾಳೇಶ್ವರ ದಲ್ಲಿರುವ ಈ ಶಿವ ದೇವರಿಗೆ ಪೊರಕೆಯನ್ನು ಕಾಣಿಕೆ ರೂಪದಲ್ಲಿ ಅರ್ಪಿಸಿದರೆ ಎಲಾ ತರಹದ ಕಾಯಿಲೆಗಳು ದೂರವಾಗುತ್ತದೆ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ. ಜನರು ತಮ್ಮ ಕಾಯಿಲೆಗಳಿಂದ ಮುಕ್ತರಾದರೆ ಈ ಕಾಣಿಕೆಯನ್ನು ದೇವರಿಗೆ ಹರಕೆ ರೂಪದಲ್ಲಿ ಕೊಡುತ್ತಾರೆ.
ಈ ದೇವಾಲಯವು ಹಲವು ಶತಮಾನಗಳ ಹಿಂದಿನದ್ದಾದ್ದರಿಂದ ಚರ್ಮ ರೋಗದಿಂದ ಬಳಲುತ್ತಿರುವವರಿಗೆ ಈ ದೇವಾಲಯವು ಹೆಚ್ಚಾಗಿ ಆಕರ್ಷಿತವಾಗುತ್ತದೆ. ಸೋಮವಾರವು ಶಿವ ದೇವರನ್ನು ಪೂಜೆ ಮಾಡಲು ಇಲ್ಲಿ ಪ್ರಶಸ್ತವಾದ ದಿನವೆಂದು ಪರಿಗಣಿಸಲಾಗುತ್ತದೆ.