ಕಾಲ ಭೈರವ ದೇವಾಲಯ ವಿಂಧ್ಯಾಚಲ್ ನಗರದ ನೈರುತ್ಯಕ್ಕೆ ಇರುವ ಹಳೆಯ ದೇವಾಲಯವಾಗಿದೆ. ಕ್ಷೇತ್ರಪಾಲ ಎಂದೂ ಪ್ರಸಿದ್ಧವಾಗಿದ್ದು ದೇವಾಲಯದ ರಕ್ಷಕನೆಂದು ಪರಿಗಣಿಸಲಾಗುವ ಶ್ರೀ ಕಾಲ ಭೈರವ ಇಲ್ಲಿನ ಪೂಜ್ಯನೀಯ ದೇವರು. ಈ ಸ್ಥಳ ಧಾರ್ಮಿಕ ಹಬ್ಬಗಳ ಸಂದರ್ಭಗಳಲ್ಲಿ ಭಕ್ತರನ್ನು ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ.
ದೇವಾಲಯದ ಮುಂದಿನ ಭೈರವ ಕುಂಡ ಅಥವಾ ಕೊಳ ಪವಿತ್ರ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಈ ನೀರು ಔಷಧೀಯ ಗುಣಗಳನ್ನು ಹೊಂದಿದೆಯೆಂದು ನಂಬಲಾಗಿದೆ ಮತ್ತು ಪ್ರಾಕೃತಿಕ ಚಿಕಿತ್ಸೆಯಲ್ಲಿ ನಂಬಿಕೆಯಿರುವ ಯಾರಾದರೂ ಇಲ್ಲಿಗೆ ಆಗಮಿಸಬಹುದು!