ಬರಿಪಾದವು ಮಯೂರ್ಭಂಜನ ಮುಖ್ಯ ಜಿಲ್ಲಾ ಕೇಂದ್ರವಾಗಿದೆ. ಸಿಮಿಲಿಪಾಲ ರಾಷ್ಟ್ರೀಯ ಉದ್ಯಾನವನವು ಬರಿಪಾದದಲ್ಲಿದೆ. ಬರಿಪಾದವು ಮಯೂರ್ಭಂಜವು ಸಾಂಸ್ಕತಿಕ ಮುಖ್ಯ ಕೇಂದ್ರವಾಗಿದೆ. ಇಲ್ಲಿ ಚಾಹು ನೃತ್ಯ ಎಂಬ ಸ್ಥಳೀಯ ನೃತ್ಯ ಪ್ರಕಾರವನ್ನು ಕಲಿತ ಸಾಕಷ್ಟು ಜನರು ನಿಮಗೆ ಬರಿಪಾದದಲ್ಲಿ ಸಿಗುತ್ತಾರೆ. ಈ ನೃತ್ಯಕ್ಕೆ ಸಿದ್ಧಗೊಂಡಿರುವ ವೇದಿಕೆಯ ಜೀವಂತಿಕೆ ಮತ್ತು ನೃತ್ಯಗಾರ್ತಿಯರ ವೈಭವವನ್ನು ನೋಡಲೇ ಬೇಕು. ಪ್ರವಾಸಿಗರು ಯಾವುದೇ ಕಾಣಕ್ಕೂ ಈ ಶಾಸ್ತ್ರೀಯ ನೃತ್ಯ ಪ್ರಕಾರ ಪ್ರದರ್ಶನವನ್ನು ನೋಡುವುದನ್ನು ಮರೆಯಲೇ ಬಾರದು. ಬರಿಪಾದದ ರಥೋತ್ಸವ ಅಥವಾ ರಥಯಾತ್ರೆ ಸಂಪ್ರದಾಯವು ಇಲ್ಲಿನ ಪ್ರಮುಖ ಹೆಗ್ಗುರುತು ಆಗಿದೆ.
ರಥಯಾತ್ರೆಯ ಸಂದರ್ಭದಲ್ಲಿ ಇಲ್ಲಿ ಬಹು ಜನಸಂದಣಿ ಇರುತ್ತದೆ. ಒರಿಸ್ಸಾದಲ್ಲಿ ಪುರಿ ಜಗನ್ನಾಥನ ರಥಯಾತ್ರೆಯ ನಂತರ ಇಲ್ಲಿಯೇ ಅಷ್ಟೊಂದು ಜನಸಂದಣಿ ಕಂಡು ಬರುತ್ತದೆ. ಆದ್ದರಿಂದ ಇದಕ್ಕೆ ಎರಡನೇಯ ಪುರಿ ಎಂಬ ಅನ್ವರ್ಥಕ ನಾಮವಿದೆ. ಬರಿಪಾದದಲ್ಲಿ ತಾಯಿ ಸುಭದ್ರಳ ರಥವನ್ನು ಕೇವಲ ಮಹಿಳಾ ಭಕ್ತರೇ ಏಳೆದರು ಎಂಬ ನಂಬಿಕೆ ಇಲ್ಲಿಯ ಸ್ಥಳೀಯರಲ್ಲಿದೆ.
ಜಗಧ್ಧಾತ್ರಿಯ ಮೇಳವು ಜಗತ್ತಿನ ದೇವತೆಯಾದ ತಾಯಿ ಜಗದ್ಧಾತ್ರಿ ದೇವತೆಯ ಗೌರವರ್ಥದ ಆಚರಣೆಯಾಗಿದೆ. ಬರಿಪಾದವು ಮೂಲಭೂತವಾಗಿ ಒಂದು ಜೀವನದ ಆಚರಣೆಯಾಗಿದೆ. ಮತ್ತು ಇಲ್ಲಿರುವ ಸಾಂಸ್ಕøತಿಕ ಉತ್ಸಾಹವು ನೀವು ಬರಿಪಾದವನ್ನು ಬಿಟ್ಟ ನಂತರವೂ ನಿಮ್ಮಲ್ಲಿ ಧೀರ್ಘಕಾಲ ಉಳಿದಿರುತ್ತದೆ.