ಮಯೂರ್ಭಂಜವು ಪ್ರವಾಸೋದ್ಯಮವು ಅದ್ಭುತವಾದ ದೃಶ್ಯಗಳು ಮತ್ತು ಧ್ವನಿಗಳನ್ನು ಹೊಂದಿದ್ದು, ಇವುಗಳು ಇಲ್ಲರಿಗೂ ಅಹ್ವಾನವನ್ನು ನೀಡುತ್ತದೆ. ಇಲ್ಲಿ ಪ್ರತಿಯೊಂದು ಹಬ್ಬಗಳನ್ನು ಅನುಪಮ ವೈಭವ ಮತ್ತು ಆತ್ಮ ಗೌರವದೊಂದಿಗೆ ಆಚರಿಸಲಾಗುತ್ತದೆ. ಈ ಹಬ್ಬಗಳಿಗೆ ದೂರ ಮತ್ತು ಸಮೀಪದ ಸ್ಥಳಗಳ ಜನರು ಬರುತ್ತಾರೆ. ಈ ಸಮಯದಲ್ಲಿ ಅಪಾರವಾದ ಜನಸಂದಣಿ ಇರುತ್ತದೆ. ಚೈತ್ರ ಪರ್ವ ಉತ್ಸವದಲ್ಲಿ ದೇಶಾದ್ಯಂತ ಇರುವ ಪ್ರತಿಭಾನ್ವಿತ ವ್ಯಕ್ತಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಜನಮನ್ನಣೆಯನ್ನು ಗಳಿಸುತ್ತಾರೆ.
ಮಯೂರ್ಭಂಜವು ಉತ್ತಮ ಪ್ರವಾಸಿ ತಾಣಗಳಿಂದ ಸುತ್ತುವರೆದಿದ್ದು, ಈ ಸ್ಥಳಗಳು ಆಕರ್ಷಕವಾಗಿವೆ. ಮಯೂರ್ಭಂಜ ಪ್ರವಾಸೋದ್ಯಮಕ್ಕೆ ಬರಿಪಾದವು ನೀರೆರೆದಿದೆ. ಇಲ್ಲಿರುವ ರಾಷ್ಟ್ರೀಯ ಉದ್ಯಾನವನವಾದ ಸಿಮಿಲಿಪಾಲವು ಸಹ ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ದೇವಕುಂಡದಲ್ಲಿರುವ ಭವ್ಯವಾದ ದೃಶ್ಯಾವಳಿಯು ಪ್ರವಾಸಿಗರ ಉಸಿರು ಕಟ್ಟುವಂತೆ ಮಾಡುತ್ತದೆ. ಖಿಚಿಂಗವು ಪ್ರವಾಸಿಗರಿಗೆ ಆ ಸ್ಥಳದಲ್ಲಿ ಅನೇಕ ವರ್ಷಗಳಿಂದ ಇರುವ ದೇವಾಲಯಗಳಿಗೆ ಪ್ರವಾಸ ಮಾಡುವ ಅವಕಾಶವನ್ನು ಒದಗಿಸುತ್ತದೆ.
ಮಯೂರ್ಭಂಜ : ಖನಿಜಗಳ ಸ್ವರ್ಗ
ಮಯೂರರ್ಭಂಜ ಪ್ರದೇಶವು ತಾನು ಹೊಂದಿರುವ ಅಪಾರವಾದ ಖನಿಜಗಳ ನಿಕ್ಷೇಪಗಳಿಂದ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಈ ಪ್ರದೇಶದಲ್ಲಿರುವ ಖನಿಜ ಸಂಪನ್ಮೂಲಗಳು ಮಯೂರರ್ಭಂಜ ಪ್ರದೇಶದ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುತ್ತವೆ. ಮಯೂರ್ಭಂಜ ಪ್ರದೇಶದ ವಿನ್ಯಾಸವು ಯಾವ ರೀತಿಯಾಗಿದೆ ಎಂದರೆ, ಭಾಗಶಃ ನಿಧಾನವಾಗಿ ಹರಿಯುತ್ತಿರುವ ನದಿಯೊಂದಿಗೆ ಉರುಳುತ್ತಿರುವ ಬೆಟ್ಟದಂತಿದೆ. ಆದಾಗ್ಯೂ ಈ ಪ್ರದೇಶದಲ್ಲಿ ಅಸಂಖ್ಯಾತ ಗಣಿಗಳು ಕಾಯನಿರ್ವಹಿಸುತ್ತಿವೆ. ಇದರಿಂದ ಹಾಳಾಗುತ್ತಿರುವ ಈ ಪ್ರದೇಶದ ನೈಸರ್ಗಿಕ ಭೂ ರಚನೆಯ ಗುಣಮಟ್ಟವನ್ನು ಸಿಮಿಲಿಪಾಲ ರಾಷ್ಟ್ರೀಯ ಉದ್ಯಾನವನವನ್ನು ನಿರ್ಮಿಸುವ ಮೂಲಕ ಉಳಿಸಿಕೊಳ್ಳಲಾಗಿದೆ. ಇದು ಮಯೂರ್ಭಂಜನ ಪ್ರವಾಸೋದ್ಯಮವನ್ನು ವರ್ಧಿಸುತ್ತಿದೆ ಅಲ್ಲದೇ ಅದನ್ನು ಜೀವಂತವಾಗಿರಿಸಿದೆ.
ಮಯೂರ್ಭಂಜ : ಜೀವನದ ಸಂಭ್ರಮ ಮತ್ತು ಉತ್ಸಾಹ
ಮಯೂರ್ಭಂಜವು ಜೀವನದಲ್ಲಿ ಮತ್ತೆ ಸಂಭ್ರಮವನ್ನು ಮರಳಿ ತರುತ್ತದೆ. ಇಲ್ಲಿ ನಿರಂತರ ತೊರೆಯಂತೆ ಬರುವ ಸಾಲು ಹಬ್ಬಗಳು ಮತ್ತು ಜಾತ್ರೆಗಳು ಮಯೂÀರ್ಭಂಜ ಜನತೆಯನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತವೆ. ಅವರಿಗೆ ಶಕ್ತಿಯನ್ನು ಕೊಡುವ ಆಹಾರ ಎಂದರೆ ಮುಧಿ ( ಮಂಡಕ್ಕಿ). ಇದರಲ್ಲಿ ಯಾವುದೇ ಸಂಶಯವಿಲ್ಲ. ಇದು ಈ ಪ್ರದೇಶದ ಬೆಳಗಿನ ಪ್ರಧಾನ ಉಪಹಾರವಾಗಿದೆ.
ಪ್ರವಾಸಿಗರು ಇಲ್ಲಿ ವಿಶಿಷ್ಟವಾದ ಸ್ಮರಣಿಕೆಗಳನ್ನು ಖರೀದಿಸಬಹುದು. ಈ ತಾಟು ಮತ್ತು ಬಟ್ಟಲುಗಳ ಸ್ಮರಣಿಕೆಗಳು ಸಾಲ ಮರಗಳ ಎಲೆಯಿಂದ ತಯಾರಾಗುತ್ತವೆ. ಓರಿಸ್ಸಾದ ಪುರಿ ಜಗನ್ನಾಥನ ರಥಯಾತ್ರೆಯು ಮೊದಲನೇಯದಾದರೆ, ಬರಿಪಾದದ ಈ ರಥಯಾತ್ರಾ ಉತ್ಸವವು ಎರಡನೇಯದು. ಇಲ್ಲಿ ಹಬ್ಬಗಳು ಉಂಟು ಮಾಡುವ ಉತ್ಸಾಹ ಮತ್ತು ಸಂಭ್ರಮವನ್ನು ಶಬ್ದಗಳಲ್ಲಿ ಹಿಡಿದಿಡುವುದು ಖಂಡಿತವಾಗಿಯೂ ಅಸಾಧ್ಯದ ಮಾತೇ ಸರಿ. ಚಾಹು ನೃತ್ಯ ಮಯೂರರ್ಭಂಜದ ನೃತ್ಯಪ್ರಕಾರವಾಗಿದ್ದು , ಅದು ಅಲ್ಲಿನ ಆ ಪ್ರದೇಶಗಳ ಸಾಂಸ್ಕತಿಕ ಚಟುವಟಿಕೆಗಳಿಗೆ ವಿಶಿಷ್ಟ ಲಕ್ಷಣವನ್ನು ನೀಡಿದೆ.
ಮಯೂರ್ಭಂಜವನ್ನು ತಲುಪುವುದು ಹೇಗೆ?
ಇದು ಒರಿಸ್ಸಾದ ಪ್ರಮುಖ ಮತ್ತು ದೊಡ್ಡ ಜಿಲ್ಲೆಯಾದ್ದರಿಂದ, ಇಲ್ಲಿ ಸಾರಿಗೆ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಾಗುತ್ತದೆ. ನಿರಂತರವಾಗಿರುವ ರೈಲು ಮತ್ತು ಸಾರಿಗೆ ಸಂಪರ್ಕವು ಸ್ಥಳೀಯರನ್ನು ಮತ್ತು ಪ್ರವಾಸಿಗರನ್ನು ಈ ಜಿಲ್ಲೆಯ ವಿವಿಧ ಸ್ಥಳಗಳಿಗೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ಒರಿಸ್ಸಾದ ಮೊದಲ ವಿಮಾನ ನಿಲ್ದಾಣವನ್ನು ಬ್ರಿಟಿಷ ವಸಾಹುತಗಾರಗು ನಿರ್ಮಿಸಿದರು. ಇವತ್ತು ಇದು 2 ಕೀಲೊ ಮೀಟರ ರನ ವೇ ಯನ್ನು ಹೊಂದಿದೆ.
ಮಯೂರ್ಭಂಜ ಹವಾಮಾನ
ಸಪ್ಟಂಬರ ಮತ್ತು ಮಾರ್ಚ ತಿಂಗಳುಗಳು ಮಯೂರ್ಭಂಜಕ್ಕೆ ಭೇಟಿ ಕೊಡಲು ಯೋಗ್ಯವಾಗಿದೆ. ಈ ಸಮಯದಲ್ಲಿ ತಾಪಮಾನವು ಆದ್ರ್ರತೆಯಿಂದ ಕೂಡಿರುತ್ತದೆ.