ಶ್ರೀ ವದನ್ಯೇಶ್ವರ ದೇವಸ್ಥಾನವು ಕಾವೇರಿಯ ಉತ್ತರ ದಂಡೆಯಲ್ಲಿದೆ. ಇದು ಸಾಮಾನ್ಯವಾಗಿ ವಲ್ಲಾಲರ್ ಕೊಯಿಲ್ ಎಂದೇ ಪ್ರಸಿದ್ಧಿ. ಇದು ಶಿವನ ದೇಗುಲ. ಇಲ್ಲಿನ ಸ್ಥಳ ಪುರಾಣದ ಪ್ರಕಾರ ನಂದಿ ದೇವನಿಗೆ ಶಿವನನ್ನು ಹೊರುತ್ತಿರುವವನು ತಾನು ಎಂಬ ಅಹಂಕಾರ ಹೆಚ್ಚಾಗುತ್ತದೆ. ಇದರಿಂದ ನೊಂದ ಶಿವನು ಅವನಿಗೆ ಬುದ್ಧಿ ಕಲಿಸಲು ನಿರ್ಧರಿಸುತ್ತಾನೆ. ತನ್ನ ಜಟೆಯಲ್ಲಿನ ಕೂದಲೆಳೆಯೊಂದನ್ನು ನಂದಿಗೆ ಹೊರಲಾಗದಷ್ಟು ಭಾರವಾಗಿಸಿಬಿಡುತ್ತಾನೆ.
ಇಲ್ಲಿನ ವಿಗ್ರಹ ಶ್ರೀ ಮೇಧಾ ದಕ್ಷಿಣಾಮೂರ್ತಿಯು ಯೋಗಾಸನದಲ್ಲಿ ನಂದಿಯ ಮೇಲೆ ಕುಳಿತಿರುವಂತಿದೆ. ವಿಗ್ರಹದ ಬಲಗೈ ಜ್ಞಾನಮುದ್ರೆಯಲ್ಲಿದೆ ಮತ್ತು ಎಡಗೈ ಪುಸ್ತಕವನ್ನು ಹಿಡಿದಿದೆ. ಋಷಭ ಮಂಟಪದಲ್ಲಿ ಶ್ರೀ ವದನ್ಯೇಶ್ವರ, ವಲ್ಲಲಾರ್ ಎಂದೂ ಕೂಡ ಕರೆಯಲ್ಪಡುವ ದೇವರ ವಿಗ್ರಹ ಮತ್ತು ಜ್ಞಾನಾಂಬಿಕೆ ದೇವಿಯ ವಿಗ್ರಹಗಳಿವೆ. ದೇವಸ್ಥಾನದ ಸಮೀಪದಲ್ಲಿನ ಕಾವೇರಿ ನದಿಯ ನೋಟ ರಮಣೀಯವಾದದ್ದು. ಇವು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.