ಕಾವೇರಿಯ ತುಲ ಘಟ್ಟದಲ್ಲಿರುವ ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನವು “ದಕ್ಷಿಣದ ಕಾಶಿ”ಯೆಂದೇ ಪ್ರಸಿದ್ಧವಾಗಿದೆ. ವಿಶ್ವನಾಥಸ್ವಾಮಿಯೆಂದರೆ ಲೋಕವನ್ನು ಪಾಲಿಸಬಲ್ಲವನು ಅಂದರೆ ಶಿವನಷ್ಟೇ ಶಕ್ತಿಶಾಲಿಯಾದವನು ಎಂದರ್ಥ. ಕಾಶಿಗೆ ಹೋಗಲಾಗದವರು ಇಲ್ಲಿಗೆ ಬರುತ್ತಾರೆ. ಕಾಶಿಗೆ ಹೋಗಿ ಗಂಗೆಯಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳು ಪರಿಹಾರವಾಗುತ್ತದೆ ಮತ್ತು ಗಂಗೆಯಲ್ಲಿ ಅಸ್ಥಿ ವಿಸರ್ಜನೆ ಮಾಡಿದರೆ ಆತ್ಮಗಳಿಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ. ಕಾವೇರಿ ತಟದಲ್ಲಿರುವ ಈ ದೇವಸ್ಥಾನ ಕೂಡ ಅಷ್ಟೇ ಪ್ರಭಾವಶಾಲಿಯಾದದ್ದು ಎಂದು ಹೇಳಲಾಗುತ್ತದೆ. ದೋಂಡಿ ವಿನಾಯಕ ಮತ್ತು ಭೈರವ ವಿಗ್ರಹಗಳನ್ನು ಶಿವ-ಪಾರ್ವತಿಯರ ವಿಗ್ರಹಗಳೊಂದಿಗೆ ಕಾಣಬಹುದು.