ಮಥುರಾ-ಆಗ್ರಾ ರಸ್ತೆಯ ಮೇಲೆ ಉಪಸ್ಥಿತವಿರುವ ಈ ಕೇಶವಜೀ ಗೌಡಿಯಾ ಮಠ ಮತ್ತೊಂದು ಪ್ರಸಿದ್ಧ ಮತ್ತು ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. ಮಥುರಾ ಪಟ್ಟಣದ ಮುಖ್ಯ ದೈವವಾಗಿರುವ ಭಗವಾನ್ ಶ್ರೀಕೃಷ್ಣನ ಹೆಸರನ್ನೇ ಮಠಕ್ಕೂ ಇಡಲಾಗಿದೆ. ಶ್ರೀಮದ್ ಭಕ್ತವೇದಾಂತ ನಾರಾಯಣ ಮಹಾರಾಜರನ್ನು ಹಿಂದಿ ಮಾತನಾಡುವ ಉತ್ತರ ಭಾರತದ ಭಕ್ತರಲ್ಲಿ ನಿರ್ಮಲ ಭಕ್ತಿ ಸಂಪ್ರದಾಯವನ್ನು ಪ್ರಸಾರ ಮಾಡಲು ನೇಮಕಗೊಳಿಸಲಾಗಿತ್ತು. ಇದನ್ನು ಹೊರತುಪಡಿಸಿ, ಈ ಮಠವು ಮರಮಾನಂದವನ್ನು, ಜ್ಞಾನೋದಯವನ್ನು ಹೊಂದಲು ಬಯಸುವ ವಿದೇಶಿ ಭಕ್ತರನ್ನು ಬಹುವಾಗಿ ಆಕರ್ಷಿಸುತ್ತಿದೆ. ಇಲ್ಲಿ ಬರುವವರು ಶ್ರೀಕೃಷ್ಣನ ಭಗವದ್ಗೀತೆಯ ಬೋಧನೆಯನ್ನು ಅರ್ಥೈಸಿಕೊಳ್ಳಲು ಇಚ್ಛಿಸುತ್ತಾರೆ.