ಸರಿಯಾಗಿ ಪಟ್ಟಣದ ಮುಖ್ಯ ಅಂಚೆ ಕಚೇರಿಯ ಮುಂಭಾಗದಲ್ಲಿ ಈ ರಂಗಭೂಮಿಯು ಉಪಸ್ಥಿತವಿದೆ. ಇದು ಧಾರ್ಮಿಕ ಹಾಗು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಪೌರಾಣಿಕ ಕಥೆಯ ಪ್ರಕಾರ, ಇದೇ ಸ್ಥಳದಲ್ಲಿ ಶ್ರೀಕೃಷ್ಣ ತನ್ನ ಸೋದರಮಾವ ಕಂಸನ ಜೊತೆ ಕುಸ್ತಿಯಾಡಿದ್ದು.
ಈ ಪಟ್ಟಣದಲ್ಲಿ ಕಂಸನನ್ನು ಕೊಂದು ತನ್ನ ತಂದೆ ತಾಯಿಯನ್ನು ಸೆರೆಯ ಬಂಧನದಿಂದ ಬಿಡುಗಡೆ ಮಾಡಿದನಂತೆ. ಹಾಗೆ, ತನ್ನ ತಾಯಿಯ ತಂದೆಯನ್ನು ಅಂದರೆ ದೇವಕಿಯ ತಂದೆಗೆ ಸಿಂಹಾಸನವನ್ನು ಕೊಡಿಸಿದನಂತೆ. ಕಂಸನ ತಂಗಿಯಾದ ದೇವಕಿ ಹಾಗು ಅವಳ ಗಂಡನಾದ ವಸುದೇವನನ್ನು ಅವರ ಏಳನೇ ಸಂತಾನದಿಂದ ಕಂಸನ ಪ್ರಾಣಕ್ಕೆ ಕುತ್ತು ಇದೆ ಎಂಬುದನ್ನು ಅಶರೀರವಾಣಿಯಿಂದ ಕೇಳಿ ಅವರಿಬ್ಬರನ್ನು ಕಂಸ ಸೆರೆಮನೆಯಲ್ಲಿ ಇರಿಸಿದ್ದ.
ಬೌದ್ಧ ಧರ್ಮಕ್ಕೂ ಮಥುರಾ ಪಟ್ಟಣ ಕೇಂದ್ರವಾಗಿತ್ತು. ಬೌದ್ಧ ಶೈಲಿಯ ಕಟ್ಟಡವನ್ನು ನಾವು ರಂಗಭೂಮಿಯ ಸುತ್ತಮುತ್ತಲೂ ಕಾಣುತ್ತೇವೆ. ಇವುಗಳನ್ನು ಮೌರ್ಯನ ಕಾಲದಲ್ಲಿ ಕಟ್ಟಿಸಲಾಗಿತ್ತು ಎಂದು ಹೇಳಲಾಗುತ್ತದೆ. ಮೌರ್ಯ ರಾಜವಂಶ ಅವನತಿ ಹೊಂದುತ್ತಲೇ ಬೌದ್ಧ ಧರ್ಮವೂ ಕ್ಷೀಣಿಸಿ ಹಿಂದೂ ಧರ್ಮ ಸ್ಥಾಪಿತವಾಯಿತು.