ಔರಂಗಜೇಬ್ ಕಾಲದಲ್ಲಿ ಗವರ್ನರ್ ಆಗಿದ್ದ ನಾಬಿರ್ ಖಾನ್ ಈ ಜಾಮಾ ಮಸೀದಿಯನ್ನು ಕಟ್ಟಿಸಿದ. ಇದರ ಮುಖ್ಯ ಆಕರ್ಷಣೆಯೆಂದರೆ ಮಸೀದಿಯಲ್ಲಿರುವ ನಾಲ್ಕು ಅಲಂಕೃತ ಗೋಪುರಗಳು ಹಾಗು ಎತ್ತರದ ಕಟ್ಟ ಮೇಲಿರುವ ಮೋಸಾಯಿಕ್ ಪ್ಲಾಸ್ಟರಿಂಗ್ ಗಳು. ಈ ಮಸೀದಿ ಕೃಷ್ಣ ಭೂಮಿ ಮಂದಿರದ ಸಮೀಪದಲ್ಲಿಯೇ ಇದೆ. ಹಿಂದೂ ಮುಸಲ್ಮಾನರ ಸಹಬಾಳ್ವೆಯ ಸಂಕೇತವಾಗಿ ಎರಡೂ ಕಟ್ಟಡಗಳು ಅಕ್ಕಪಕ್ಕದಲ್ಲಿ ಇವೆ.