ಸಾಕಷ್ಟು ಪ್ರವಾಸಿಗರಿಗೆ ಭಾರತ ಆದ್ಯಾತ್ಮಿಕ ಕೇಂದ್ರವಾಗಿದೆ. ಮಥುರಾ ನಗರ ಭಾರತದ ಎಲ್ಲ ಪವಿತ್ರ ಕ್ಷೇತ್ರಗಳಲ್ಲಿ ಮುಖ್ಯವಾದದ್ದು. ಇದು ಶಾಂತಿ ಹಾಗು ಜ್ಞಾನೋದಯವನ್ನು ಬಯಸುವ ಸಾಕಷ್ಟು ಸಂದರ್ಶನಕಾರರನ್ನು ತನ್ನತ್ತ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಬಹಳಷ್ಟು ಪ್ರವಾಸಿಗರು ಜೈ ಗುರುದೇವ ಆಶ್ರಮಕ್ಕೆ ದಿನಂಪ್ರತಿ ಬರುತ್ತಾರೆ. ಇದನ್ನು ಸ್ಥಾಪಿಸಿದವರು ಜೈಗುರುದೇವ ಸ್ವಾಮೀಜಿ. ಆ ಆಶ್ರಮಕ್ಕೆ ಅವರ ಹೆಸರನ್ನೇ ಇಡಲಾಗಿದೆ. ಈ ಆಶ್ರಮವನ್ನು ಚೆನ್ನಾಗಿ ನಡೆಸಿಕೊಂಡು ಬರಲಾಗಿದ್ದು, ಶಾಂತಿಯನ್ನು ಅರಸುತ್ತ ಬಂದ ಭಕ್ತರಿಗೆ ಇದು ಶಾಂತಿ, ನೆಮ್ಮದಿ ನೀಡುವ ತಾಣವಾಗಿದೆ.