ಮರವಂತೆಯ ಮೂಲಕ ಹಾದು ಹೋಗುವ ಪ್ರವಾಸಿಗರು ಮರವಂತೆಯಿಂದ 21.6ಕಿ.ಮೀ ದೂರದಲ್ಲಿರುವ ಆನೆಗುಡ್ಡೆ ವಿನಾಯಕ ದೇವಾಲಯಕ್ಕೆ ಒಮ್ಮೆ ಭೇಟಿಕೊಡಬಹುದು. ಇದು ಗಣಪತಿಯ ದೇವಾಲಯವಾಗಿದ್ದು, ತುಳುನಾಡಿನ ಸಪ್ತಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಹಾಗು ಈ ಕ್ಷೇತ್ರದಲ್ಲಿ ಜನರು ಮುಕ್ತಿಯನ್ನು ಪಡೆಯಬಹುದೆಂದು ನಂಬುವುದರಿಂದ ಇದನ್ನು ಮುಕ್ತಿ ಸ್ಥಳವೆಂದು ಸಹಾ ನಂಬುತ್ತಾರೆ. ಈ ಸ್ಥಳದ ಹೆಸರು ಆನೆ ಗಜವನ್ನು ಸೂಚಿಸಿದರೆ ಗುಡ್ಡ ಇಲ್ಲಿನ ಬೆಟ್ಟಗುಡ್ಡಗಳಿಂದಾಗಿ ಬಂದಿದೆ.ಇಲ್ಲಿನ ದೇವಾಲಯದ ಪ್ರಮುಖ ಗರ್ಭಗುಡಿಯಲ್ಲಿ ಗಣಪತಿಯ ಮೂರ್ತಿಯಿದ್ದು, ನಾಲ್ಕು ಕೈಗಳಿವೆ. ಇವುಗಳಲ್ಲಿನ ಎರಡು ಹಸ್ತಗಳು’ವರದ ಹಸ್ತ’( ವರವನ್ನು ನೀಡುವ) ವನ್ನು ಪ್ರತಿನಿಧಿಸುತ್ತವೆ. ಮತ್ತೆರಡು ಹಸ್ತಗಳು ಪಾದವನ್ನು ತೋರಿಸುವ ಮೂಲಕ ಮುಕ್ತಿಯನ್ನು ಸೂಚಿಸುತ್ತವೆ. ಗಣೇಶ ಚತುರ್ಥಿ ಮತ್ತು ಸಂಕಷ್ಟ ಹರ ಚತುರ್ಥಿಗಳನ್ನು ಇಲ್ಲಿ ವಿಶೇಷವಾಗಿ ನಡೆಸಲಾಗುತ್ತದೆ. ಇಲ್ಲಿನ ದೇವಾಲಯದಲ್ಲಿ ಭಕ್ತಾಧಿಗಳು ತುಲಾಭಾರದ ವಿಧಿಯನ್ನು ಸಹಾ ನಡೆಸುತ್ತಾರೆ. ಡಿಸೆಂಬರ್ ತಿಂಗಳಿನಲ್ಲಿ ಈ ದೇವಾಲಯದಲ್ಲಿ ರಥೋತ್ಸವವನ್ನು ನಡೆಸುತ್ತಾರೆ. ಮಹಲಿಂಗೇಶ್ವರ ದೇವಾಲಯವು ಆನೆಗುಡ್ಡೆ ವಿನಾಯಕ ದೇವಾಲಯಕ್ಕೆ ಸಮೀಪದಲ್ಲಿರುವ ಮತ್ತೊಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯ ದೇವಾಲಯವಾಗಿದೆ.