ಶ್ರೀ ಗುರು ರಾಘವೇಂದ್ರ ಸ್ವಾಮಿ ದೇವಸ್ಥಾನ ಮಂತ್ರಾಲಯದ ಮುಖ್ಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಗುರು ರಾಘವೇಂದ್ರರು, ಭಗವಾನ್ ವಿಷ್ಣುವಿನ ಉತ್ಕೃಷ್ಟ ಭಕ್ತನಾಗಿದ್ದ ಭಕ್ತ ಪ್ರಹ್ಲಾದನ ಅವತಾರವೆಂದು ನಂಬಲಾಗಿದೆ. ಭಗವಾನ್ ವಿಷ್ಣುವು ನರಸಿಂಹಾವತಾರದಲ್ಲಿ ಪ್ರಹ್ಲಾದನ ದೈತ್ಯ ತಂದೆಯಾದ ಹಿರಣ್ಯಕಶ್ಯಪುನನ್ನು ಕೊಲ್ಲುವ ಮೂಲಕ ಅವನ ಕ್ರೂರ ಉದ್ದೇಶಗಳಿಂದ ತನ್ನ ಪ್ರಿಯ ಭಕ್ತನಾದ ಪ್ರಹ್ಲಾದನನ್ನು ಉಳಿಸಿದ್ದನು. ತುಂಗಭದ್ರೆಯ ತಟದಲ್ಲಿರುವ ಮಂತ್ರಾಲಯವನ್ನೇ ಶ್ರೀ ಗುರು ರಾಘವೇಂದ್ರ ಸ್ವಾಮಿ ಅವರು ತಮ್ಮ ವೃಂದಾವನನ್ನು ರೂಪಿಸಲು ಆಯ್ಕೆಮಾಡಿಕೊಂಡರು.
ದೇವಾಲಯವು ಭಕ್ತವೃಂದದಲ್ಲಿ ಅತ್ಯಂತ ಜನಪ್ರೀಯವಾಗಿದ್ದು ಪ್ರತಿ ವರ್ಷ ಗುರು ಜಯಂತಿ ಸಮಯದಲ್ಲಿ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುವರು. ಎರಡು ದಿನಗಳ ಕಾಲ ಮುಂದುವರಿಯುವ ಈ ಸಂಭ್ರಮಾಚರಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಿದ್ದು, ದೇವಸ್ಥಾನವು ಸಂಭ್ರಮ, ಸಡಗರಗಳಿಂದ ಕೂಡಿರುತ್ತದೆ. ಈ ಸಂಭ್ರಮಕ್ಕೆ ಕಾರಣ ಗುರುಗಳು ಇನ್ನೂ ವೃಂದಾವನದಲ್ಲಿದ್ದರೆಂಬ ಗಾಢವಾದ ನಂಬಿಕೆ. ವೃಂದಾವನ ಪ್ರವೇಶದ ವೇಳೆ ಗುರುಗಳು ಸ್ವತಃ ತಾವು ಮುಂದಿನ 361 ವರ್ಷಗಳ ಕಾಲ ಈ ಸ್ಥಳದಲ್ಲಿ ವಾಸಿಸುವದಾಗಿ ಹೇಳಿದ್ದರೆಂಬುದು ಈ ನಂಬಿಕೆಗೆ ಪುಷ್ಠಿಕೊಡುತ್ತದೆ.