ಪಂಚಮುಖಿ ಆಂಜನೇಯ ದೇವಸ್ಥಾನವು ಮಂತ್ರಾಲಯದಿಂದ ಕೇವಲ 5 ಕಿಮೀ ದೂರದಲ್ಲಿದೆ. ಇದು ಭಗವಾನ ಆಂಜನೇಯ ಅಥವಾ ಹನುಮಂತನ ದೇವಸ್ಥಾನವಾಗಿದ್ದು ಇಲ್ಲಿನ ವಿಗ್ರಹದಲ್ಲಿ ಆಂಜನೇಯನಿಗೆ ಗರುಡ, ನರಸಿಂಹ ಸ್ವಾಮಿ, ಹಯಗ್ರೀವ ಮತ್ತು ಭಗವಾನ ವರಾಹನನ್ನು ಪ್ರತಿನಿಧಿಸುವ ಐದು ತಲೆಗಳಿವೆ.
ಶ್ರೀ ಗುರು ರಾಘವೇಂದ್ರರು ರಾಮ ಮತ್ತು ಹನುಮಾನರ ಉತ್ಕೃಷ್ಟ ಭಕ್ತರೆಂದು ನಂಬಲಾಗಿದ್ದು, ಅವರು ಹನ್ನೆರಡು ವರ್ಷಗಳ ಕಾಲ ತೀವ್ರ ತಪಸ್ಸನ್ನಾಚರಿಸಿದ್ದರ ಫಲವಾಗಿ ಹನುಮಾನನು ಪಂಚಮುಖಿಯ ಅವತಾರದಲ್ಲಿ ಗುರುಗಳಿಗೆ ದರ್ಶನ ಕೊಟ್ಟಿದ್ದರೆಂದು ನಂಬಲಾಗಿದೆ.
ದೇವಸ್ಥಾನವಿರುವ ಕ್ಷೇತ್ರ ತುಂಬಾ ರಮಣೀಯವಾಗಿದ್ದು ಈ ಪ್ರದೇಶದ ಮೂಲಕ ಪ್ರಯಾಣಿಸುವ ಪ್ರವಾಸಿಗರು ಭೇಟಿ ನೀಡಲೇಬೇಕಾದಂತಹದಾಗಿದೆ. ದೇವಾಲಯವು ಬಂಡೆ ಕಲ್ಲುಗಳ ಮಧ್ಯದಲ್ಲಿ ನಿರ್ಮಿತವಾಗಿದ್ದು, ಸುಂದರ ಮತ್ತು ಪ್ರಶಾಂತವಾಗಿದೆ. ಹಾಸಿಗೆ-ದಿಂಬುಗಳನ್ನು ಹೋಲುವ, ದೇವರುಗಳ ವಿಮಾನವನ್ನು ಹೋಲುವ ಬಂಡೆಗಳ ನೈಸರ್ಗಿಕ ರಚನೆಗಳು ದೇವಾಲಯದ ದಾರಿಯಲ್ಲಿ ಕಾಣಸಿಗುತ್ತದೆ.