ಹಿಮಾಚಲ್ ಪ್ರದೇಶದಲ್ಲಿರುವ ಮನಿಕರನ್ನಲ್ಲಿ ಪ್ರಾಚೀನ ಶಿವನ ದೇವಾಲಯವಿದೆ. ಇಲ್ಲಿ ಶಿವನ ಜೊತೆಗೆ ತ್ರಿಮೂರ್ತಿಗಳಲ್ಲಿ ಒಬ್ಬರಾದ ಸೃಷ್ಟಿಕಾರಕನಾದ ಬ್ರಹ್ಮ, ಸ್ಥಿತಿಕಾರಕನಾದ ವಿಷ್ಣು ದೇವರುಗಳ ವಿಗ್ರಹಗಳನ್ನೂ ನೋಡಬಹುದು. ಈ ದೇವಾಲಯವು 1905 ರಲ್ಲಿ ಈ ಪ್ರಾಂತ್ಯದಲ್ಲಿ ಸಂಭವಿಸಿದ 8.0 ಪ್ರಮಾಣದ ಭೀಕರ ಭೂಕಂಪದ ಕಾರಣದಿಂದಾಗಿ ಸ್ವಲ್ಪ ಮಟ್ಟಿಗೆ ವಾಲಿದೆ. ಇಲ್ಲಿನ ನಂಬಿಕೆಗಳ ಪ್ರಕಾರ, ಕುಲ್ಲು ಕಣಿವೆಯಲ್ಲಿರುವ ದೇವತೆಗಳು ಪ್ರತಿ ವರ್ಷ ಈ ದೇವಾಲಯಕ್ಕೆ ಭೇಟಿಕೊಡುತ್ತಾರಂತೆ. ಹಾಗಾಗಿ ಇಲ್ಲಿಗೆ ಹಿಂದೂ ಧರ್ಮದ ಭಕ್ತಾಧಿಗಳು ಮತ್ತು ಪ್ರವಾಸಿಗರು ವರ್ಷಪೂರ್ತಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ.