ಪುರಾತನ ಮುನಿಯ ಹೆಸರಿನಿಂದ ಗುರುತಿಸಲ್ಪಡುವ ಐತಿಹಾಸಿಕ ಗುಹೆಗಳ ಒಂದು ಗುಂಪು ಈ ಭರ್ತೃಹರಿ ಗುಹೆಗಳು. ರಾಜಾ ಭರ್ತೃಹರಿಯು ರಾಜಾ ವಿಕ್ರಮಾದಿತ್ಯನ ಮಲ ಸಹೋದರ, ವಿದ್ವಾಂಸ ಹಾಗೂ ಪ್ರಸಿದ್ದ ಕವಿ. ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗಲೆಂದು ಸಂಸ್ಕೃತವನ್ನು ಸರಳೀಕೃತಗೊಳಿಸಿದವರಲ್ಲಿ ಮೊದಲಿಗರು. "ವಕ್ಯಾಪದಿಯ" ಸಂಸ್ಕೃತ ಭಾಷಾ ತತ್ವಶಾಸ್ತ್ರ ಮತ್ತು ವ್ಯಾಕರಣದ ಪ್ರಥಮ ಸರಳೀಕೃತ ಗ್ರಂಥದ ಕರ್ತೃ ಇವರು. ಭೋಗಭಾಗ್ಯಉಳ್ಳ ರಾಜ ಮನೆತನದಲ್ಲಿ ಜನಿಸಿದ ರಾಜಾ ಭರ್ತೃಹರಿಯು ಲೌಕಿಕ ಭೋಗಗಳಿಂದ ತುಂಬಿದ ಜೀವನವು ಹುಸಿ ಎನಿಸುತ್ತಿತ್ತು.
ತಮಗೆ ಮಿತ್ಯವೆನಿಸಿದ ಎಲ್ಲಾ ಸೌಕರ್ಯಗಳನ್ನು ಮತ್ತು ರಾಜಮನೆತನವನ್ನೂ ತ್ಯಜಿಸಿ ಜ್ಞಾನೋದಯದ ಮಾರ್ಗದಲ್ಲಿ ಜೀವನ ನಡೆಸಿದರು. ಜ್ಞಾನವನ್ನು ಅರಸುತ್ತಾ ಸತ್ಯದ ಮಾರ್ಗದಲ್ಲಿ ನಡೆಯುತ್ತಿದ್ದ ರಾಜಾ ಭರ್ತೄಹರಿಯು ಈ ಗುಹೆಗಳಿಗೆ ಬಂದಿದ್ದರೆಂಬ ಕಾರಣದಿಂದ ಈ ಗುಹೆಗಳಿಗೆ ಅವರ ಹೆಸರನ್ನಿಡಲಾಗಿದೆ. ಈ ಗುಹೆಗಳಿಗೆ ಹತ್ತಿಕೊಂಡು ನಾಥ್ ಸಮುದಾಯದ ಆರಾಧ್ಯ ದೈವವನ್ನುಳ್ಳ ಒಂದು ಸಣ್ಣ ದೇವಾಲಯವಿದೆ. ಸಾಮಾನ್ಯರಿಗೆ ಅಥವಾಗಲೆಂದೇ ಸಂಸ್ಕೃತವನ್ನು ಸರಳೀಕರಿಸಿದ ವಿದ್ವಾಂಸರ ಕವಿಗೆ ಭಕ್ತರು ಶ್ರದ್ಧಾ ಭಕ್ತಿಗಳಿಂದ ಗೌರವಿಸುತ್ತಾರೆ.