ಮಂಡಿ ಜಿಲ್ಲೆಯ ತರ್ನಾಬೆಟ್ಟದ ಮೇಲೆ ತರ್ನಾ ದೇಗುಲ ನೆಲೆಸಿದೆ. ಇದೊಂದು ಜನಪ್ರಿಯ ಪ್ರವಾಸಿ ತಾಣ ಕೂಡ ಹೌದು. ಹಿಂದು ದೇವತೆ ಪಾರ್ವತಿಯ ಅವತಾರವಾದ ಶ್ಯಾಮ ಕಾಳಿಯ ಆಲಯ ಇದಾಗಿದೆ. ಈ ದೇಗುಲವನ್ನು 17ನೇ ಶತಮಾನದಲ್ಲಿ ಅರಸು ಶ್ಯಾಮಸೇನ ನಿರ್ಮಿಸಿದ. ಇದರಿಂದಲೇ ಇದು ಶ್ಯಾಮಕಾಳಿ ದೇಗುಲ ಅಂತಲೂ ಪ್ರಸಿದ್ಧಿಯಾಗಿದೆ. ಮುಖ್ಯ ಬಜಾರ್ನಿಂದ ಇಲ್ಲಿ ತಲುಪಲು 305 ಮೆಟ್ಟಿಲು ಏರಿ ಬರಬೇಕು. ಇಲ್ಲಿ ಹಿಂದು ದೇವರುಗಳು, ಗುರುಗಳ ಆಕರ್ಷಕ ಪೇಂಟಿಂಗ್ಗಳು ದೇಗುಲದ ಒಳಗೆ ಗಮನ ಸೆಳೆಯುತ್ತವೆ.