ಸಿಖ್ಖರ 10 ನೇ ಗುರು ಗೋವಿಂದ ಸಿಂಗರಿಗೆ ಮೀಸಲಾಗಿರುವ ಕ್ಷೇತ್ರ ಗುರುದ್ವಾರ ಗೋವಿಂದ ಸಿಂಗ್. ಇದೇ ಗುರುವಿನ ಸಾರಥ್ಯ ಹಾಗೂ ನೇತೃತ್ವದಲ್ಲಿ ಸಿಖ್ ಸಮೂದಾಯವು ಮೊಘಲ್ ಅರಸು ಔರಂಗಜೇಬನ ವಿರುದ್ಧ ಹೋರಾಡಿತ್ತು. ಈ ಹೋರಾಟದಲ್ಲಿ ಸಿಂಗರಿಗೆ ರಾಜ್ಯದ ಅರಸನ ಪೂರ್ಣ ಪ್ರೋತ್ಸಾಹವೂ ಲಭಿಸಿತ್ತು. ಈ ಪವಿತ್ರ ಸ್ಥಳವು ಬಿಯಸ್ ನದಿಯ ದಂಡೆಯ ಮೇಲಿದೆ. ಈ ಗುರುದ್ವಾರವು 'ಗುರುದ್ವಾರ ಪಲಂಗ ಸಹಾಬ್ಸ್' ಅಂತಲೂ ಕರೆಸಿಕೊಳ್ಳುತ್ತದೆ.
ಇಲ್ಲಿ ಗುರು ಗೋವಿಂದ ಸಿಂಗರು ಮಲಗಲು ಬಳಸುತ್ತಿದ್ದ ಹಾಸಿಗೆ ಇದೆ. ಇದಲ್ಲದೆ, ಇಲ್ಲಿ ಸಂಗೀತ ಸಾಧನವಾದ ರಬಾಬ್ ಕೂಡ ಇದೆ. ಸಿಂಗರು ಬಳಸುತ್ತಿದ್ದ ಗನ್ ಹಾಗೂ ಮದ್ದು ಗುಂಡನ್ನು ಕೂಡ ಇಂದಿಗೂ ಸಂರಕ್ಷಿಸಿ ಇಡಲಾಗಿದೆ. ಇಲ್ಲೊಂದು ದೊಡ್ಡ ನೀರಿನ ಟ್ಯಾಂಕ್ ಇದ್ದು, ಇದರೊಳಗಿರುವ ಜಲ, ಔಷಧೀಯ ಗುಣ ಹೊಂದಿದೆ ಎಂದು ನಂಬಲಾಗುತ್ತದೆ. ಇದು ಗುರುದ್ವಾರದ ಆವರಣದಲ್ಲಿಯೆ ಇದೆ. ಗುರುದ್ವಾರದ ಒಳ ಭಾಗದ ಅಲಂಕಾರ ನೋಡಿದರೆ ಶ್ರೀಮಂತ ಕುಟುಂಬದ ಸ್ವತ್ತಾಗಿ ಗೋಚರಿಸುತ್ತದೆ.