ಹಿಮಾಚಲ ಪ್ರದೇಶದ ಮಂಡಿಯ ಹೃದಯ ಭಾಗದಲ್ಲಿರುವ ಅತ್ಯಂತ ಪ್ರಸಿದ್ಧ ಧಾರ್ಮಿಕ ಕೇಂದ್ರ ಭೂತನಾಥ ದೇಗುಲ. ದಾಖಲೆಗಳ ಪ್ರಕಾರ, ಇದರ ನಿರ್ಮಾಣ 1527ರಲ್ಲಿ ಆಗಿದೆ. ಇದನ್ನು ರಾಜಾ ಅಜ್ಬರ್ ಸೇನ್ ನಿರ್ಮಿಸಿದ್ದಾನೆ. ಈ ದೇವಾಲಯದಲ್ಲಿ ಹಿಂದು ದೇವರಾದ ಶಿವ ನೆಲೆಸಿದ್ದಾನೆ. ದೇಗುಲ ಶಿವನಿಗೆ ಮೀಸಲು. ರಾಜ್ಯದ ರಾಜಧಾನಿ ಬಾಯ್ವುಲಿಯಿಂದ ಈ ಸ್ಥಳಕ್ಕೆ ಸ್ಥಳಾಂತರಗೊಂಡ ಸಂದರ್ಭದಲ್ಲಿ ಆ ನೆನಪಿಗೆ ದೇಗುಲ ನಿರ್ಮಿಸಲಾಗಿತ್ತು. ಪುರಾಣಗಳ ಪ್ರಕಾರ, ಮಂಡಿಯ ಅಂದಿನ ಅರಸು ರಾಜಾ ಮಾಧ್ವ ಹಾಗೂ ಆತನ ವಂಶಸ್ಥರು ಹಾಗೂ ಹಿಂಬಾಲಕರು ದೇವಾಲಯಕ್ಕೆ ಭೇಟಿ ನೀಡಿ ಶಿವರಾತ್ರಿ ಪೂಜೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬೃಹತ್ ಮೆರವಣಿಗೆ ಕೂಡ ನಡೆಯುತ್ತಿತ್ತು. ಅಂದಿನಿಂದ ಇಂದಿನವರೆಗೂ ಶಿವರಾತ್ರಿ ಆಚರಣೆ ಇಲ್ಲಿ ಅದ್ದೂರಿಯಾಗಿ ಆಗುತ್ತದೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ ಉತ್ಸವ ವಾರಗಳ ಕಾಲ ನಡೆಯುತ್ತದೆ. ಇದರಲ್ಲಿ ಸ್ಥಳೀಯ 100 ದೇವರುಗಳು ಪಾಲ್ಗೊಳ್ಳುತ್ತವೆ.